ನಿರ್ಭಯಾ ಪ್ರಕರಣ: ಬಾಲಾಪರಾಧಿ ಒಂದು ಕ್ರೂರ ಪ್ರಾಣಿ, ಸುಬ್ರಮಣಿಯನ್ ಸ್ವಾಮಿ

ನಿರ್ಭಯಾ ಗ್ಯಾಂಗ್ ರೇಪ್ ಪ್ರಕರಣದ ಬಾಲಾಪರಾಧಿ ಪ್ರಾಣಿಯಂತೆ ವರ್ತಿಸಿದ್ದಾನೆ, ಆತನನ್ನು ಯಾವುದೇ ಕಾರಣಕ್ಕೂ ಬಿಡುಗಡೆ ಮಾಡಬಾರದು ಎಂದು ಬಿಜೆಪಿ...
ಸುಬ್ರಮಣಿಯನ್ ಸ್ವಾಮಿ
ಸುಬ್ರಮಣಿಯನ್ ಸ್ವಾಮಿ

ನವದೆಹಲಿ: ನಿರ್ಭಯಾ ಗ್ಯಾಂಗ್ ರೇಪ್ ಪ್ರಕರಣದ ಬಾಲಾಪರಾಧಿ ಪ್ರಾಣಿಯಂತೆ ವರ್ತಿಸಿದ್ದಾನೆ, ಆತನನ್ನು ಯಾವುದೇ ಕಾರಣಕ್ಕೂ ಬಿಡುಗಡೆ ಮಾಡಬಾರದು ಎಂದು ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ದೆಹಲಿ ಹೈಕೋರ್ಟ್ ಗೆ ಮನವಿ ಮಾಡಿದ್ದಾರೆ.

ಸುಬ್ರಮಣಿಯನ್ ಸ್ವಾಮಿ ಸಲ್ಲಿಸಿರುವ ಅಫೀಲಿನ ಹಿನ್ನೆಲೆಯಲ್ಲಿ ದೆಹಲಿ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ನೊಟೀಸ್ ನೀಡಿದ್ದು, ಈ ಸಂಬಂಧ ಮುಚ್ಚಿದ ಲಕೋಟೆಯಲ್ಲಿ ಪ್ರತಿಕ್ರಿಯಿಸುವಂತೆ ಸರ್ಕಾರಕ್ಕೆ ಸೂಚಿಸಿದೆ.

ಬಾಲಾಪರಾಧಿ ಒಬ್ಬ ತೀವ್ರಗಾಮಿಯಾಗಿದ್ದು, ಆತನಿಂದ ಸಮಾಜಕ್ಕೆ ಬೆದರಿಕೆಯಿದೆ, ಹೀಗಾಗಿ ಆತನನ್ನು ಬಿಡುಗಡೆ ಮಾಡಬಾರದು ಎಂದು ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.

ಬಾಲಾಪರಾಧಿ ಇಂಥ ಹೇಯ ಕೃತ್ಯ ಮಾಡಿರುವುದಕ್ಕೆ ಆತನನ್ನು ಕ್ರೂರ ಪ್ರಾಣಿಯಿದ್ದಂತೆ. ಆತನನ್ನು ಪ್ರಾಣಿಯಂತೆಯೇ ನಡೆಸಿಕೊಳ್ಳಬೇಕು ಎಂದು ಸ್ವಾಮಿ  ತಿಳಿಸಿದ್ದಾರೆ.


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com