ಇದನ್ನು ಗಮನಿಸಿದ ಮೋದಿ, ಸುರೇಂದ್ರನ್ ಅವರತ್ತ ತಿರುಗಿದಾಗ ನನಗೆ ನೀವು ಹೇಳಿಸಿದ್ದು ಕೇಳಿಸಿಲ್ಲ ಎಂಬ ಉತ್ತರ ಅತ್ತ ಕಡೆಯಿಂದ ಬಂತು. ಮೋದಿಯವರಿಗೆ ಸುರೇಂದ್ರನ್ ಅವರು ಎಡವಿದ್ದು ಗೊತ್ತಾಯ್ತು. ಆಗ ಅವರು, ಸುರೇಂದ್ರನ್ಗೆ ನಾನು ಹೇಳಿದ್ದು ಕೇಳಿಸುತ್ತಿಲ್ಲ ಎಂದೆನಿಸುತ್ತಿದೆ. ಮೈಕ್ ತೆಗೆದುಕೊಂಡು ಪಕ್ಕಕ್ಕೆ ಬನ್ನಿ ಎಂದರು. ಆಮೇಲೆ ತಕ್ಷಣವೇ ಸುರೇಂದ್ರನ್ ಬದಲು ಕೇರಳ ರಾಜ್ಯ ಬಿಜೆಪಿ ಅಧ್ಯಕ್ಷ ವಿ. ಮುರಳೀಧರನ್ ವೇದಿಕೆಗೆ ಬಂದು ಮೋದಿಯವರ ಭಾಷಣವನ್ನು ಅಚ್ಚುಕಟ್ಟಾಗಿ ಮಲಯಾಳಂಗೆ ತರ್ಜುಮೆ ಮಾಡಿ ಹೇಳಿದರು.