2015ರ ಜೂನ್ 12ರಂದು ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶಕ್ಕೆ ಗಡಿ ದಾಟಿ ಹೋಗಿದ್ದ ಪೂಂಚ್ ಜಿಲ್ಲೆಯ ದೆಗ್ವಾರ್ ತೆರೌನ್ ಗ್ರಾಮದ ಸತ್ತಾರ್ ದಿನ್ ಪುತ್ರ 22 ವರ್ಷದ ಮೊಹಮ್ಮದ ರಷೀದ್ ಭಾರತೀಯ ಪ್ರಜೆಯನ್ನು ಪಾಕಿಸ್ತಾನಿ ಪಡೆಗಳು ಗಡಿ ನಿಯಂತ್ರಣ ರೇಖೆಯ ಚಕನ್-ಡಾ-ಬಾಗ್ ಕ್ರಾಸಿಂಗ್ನಲ್ಲಿ ಭಾರತೀಯ ಅಧಿಕಾರಿಗಳಿಗೆ ಕಳೆದ ಸಂಜೆ ಹಸ್ತಾಂತರಿಸಿದ್ದಾರೆ ಎಂದು ರಕ್ಷಣಾ ವಕ್ತಾರರು ಹೇಳಿದ್ದಾರೆ.