ನವದೆಹಲಿ: ಮುಂಬೈನಲ್ಲಿ ಬುಧವಾರ ರಾತ್ರಿ ಏರಿಂಡಿಯಾ ವಿಮಾನದ ಎಂಜಿನ್ಗೆ ಸಿಲುಕಿ ಎಂಜಿನಿಯರ್ ರವಿ ಸುಬ್ರಮಣಿಯನ್ ಮೃತಪಟ್ಟ ಘಟನೆಗೆ ನಿಯಮ ಪಾಲನೆ ದೋಷ ಕಾರಣವೆಂಬ ಅಂಶ ಬೆಳಕಿಗೆ ಬಂದಿದೆ.
ಖಾಸಗಿ ಸಂಸ್ಥೆ ಇಂಡಿಗೋದ ನಿರ್ವಹಣಾ ವ್ಯವಸ್ಥಾಪಕ ಪ್ರದೀಪ್ ಸಿಂಗ್ ತಮ್ಮ ಕಂಪನಿಗೆ ಕಳುಹಿಸಿದ ಇಮೇಲ್ನಲ್ಲಿ ಈ ಅಂಶ ಉಲ್ಲೇಖಿಸಿದ್ದಾರೆ. ವಿಮಾನ ಅಚಾನಕ್ಕಾಗಿ ಮುಂದೆ ಚಲಿಸದಂತೆ ಚಕ್ರಗಳಿಗೆ ಹಾಕುವ ಛೋಕ್ಗಳನ್ನು ಹಾಕಿರಲಿಲ್ಲ.
ಗ್ರೌಂಡ್ ಎಂಜಿನಿಯರ್ನಿಂದ ಹೊರಡಲು ಸಂದೇಶ ಪಡೆಯುವ ಮುನ್ನವೇ ವಿಮಾನ ಚಲಿಸಿದ್ದು ಹಾಗೂ ಪೈಲಟ್ ಮತ್ತು ನೆಲಮಟ್ಟದ ಸಿಬ್ಬಂದಿಯ ನಡುವಿನ ಸಂವಹನ ಕೊರತೆಯಿಂದ ಈ ದುರ್ಘಟನೆ ಸಂಭವಿಸಿದೆ ಎಂದು ರಾವತ್ ಹೇಳಿದ್ದಾರೆ.