ಪ್ರತಿಪಕ್ಷಗಳ ದಾಳಿಗೆ ಭಯ ಬೇಡ: ಸಚಿವರಿಗೆ ಮೋದಿ

ಪ್ರತಿಪಕ್ಷಗಳ ದಾಳಿಯಿಂದ ಹಿಂಜರಿಯದಿರಿ. ಧೈರ್ಯವಾಗಿ ಅಭಿವೃದ್ಧಿ ಕಾರ್ಯ ಮುಂದುವರಿಸಿ...
ಸಚಿವರೊಂದಿಗೆ ಸಭೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ
ಸಚಿವರೊಂದಿಗೆ ಸಭೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ
Updated on
ನವದೆಹಲಿ: ``ಪ್ರತಿಪಕ್ಷಗಳ ದಾಳಿಯಿಂದ ಹಿಂಜರಿಯದಿರಿ. ಧೈರ್ಯವಾಗಿ ಅಭಿವೃದ್ಧಿ ಕಾರ್ಯ ಮುಂದುವರಿಸಿ'' ಹೀಗೆಂದು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸಚಿವರಿಗೆ ಸಲಹೆ ನೀಡಿದ್ದಾರೆ. 
ಗುರುವಾರ ಸಚಿವರೊಂದಿಗೆ ಚಾಯ್ ಪೇ ಚರ್ಚಾ ನಡೆಸಿದ ಮೋದಿ, ಸರ್ಕಾರದ ಕೆಲಸದ ಬಗ್ಗೆ ಹೆಮ್ಮೆಪಟ್ಟುಕೊಳ್ಳಿ. ಪ್ರತಿಪಕ್ಷಗಳು ಸುಳ್ಳಿನ ಕಂತೆಗಳಿಗೆ ಹೆದರಬೇಡಿ ಎಂದಿದ್ದಾರೆ.
ಒಂದೂವರೆ ಗಂಟೆಗಳ ಕಾಲ ಈ ಮಾತುಕತೆ ನಡೆಯಿತು. ಇದೇ ವೇಳೆ, ಜನವರಿಯಿಂದ ದೇಶಾದ್ಯಂತ ಸಂಚರಿಸಿ ಸಂಸತ್‍ನಲ್ಲಿ ಪ್ರತಿಪಕ್ಷಗಳು ನಡೆಸುತ್ತಿರುವ ಕುತಂತ್ರಗಳ ಬಗ್ಗೆ ನಾಗರಿಕರಿಗೆ ವಿವರಿಸುವಂತೆಯೂ ಸಚಿವರಿಗೆ ಪ್ರಧಾನಿ ಸೂಚಿಸಿದ್ದಾರೆ. 
ಪ್ರತಿಯೊಬ್ಬ ಸಚಿವರೂ ತಮ್ಮ ತಮ್ಮ ಕ್ಷೇತ್ರಗಳಿಗೆ ತೆರಳಿ, ಕನಿಷ್ಠ 30 ಗಂಟೆಗಳ ಕಾಲ ಕಳೆಯಬೇಕು ಎಂದೂ ಹೇಳಿದ್ದಾರೆ. 
ಜತೆಗೆ, ತಮ್ಮ ತಮ್ಮ ಇಲಾಖೆಗಳ ಕಾರ್ಯನಿರ್ವಹಣೆಗಳ ಬಗ್ಗೆ ನಿಯಮಿತವಾಗಿ ಪರಿಶೀಲನೆ ನಡೆಸುವಂತೆ, ಸರ್ಕಾರದ ವರ್ಚಸ್ಸು ಹೆಚ್ಚಿಸುವಂತೆ, ಕೇಂದ್ರ ಸರ್ಕಾರಿ ಯೋಜನೆಗಳಿಗೆ ಬಜೆಟ್ ಸಿದ್ಧಪಡಿಸುವಾಗ ಜನರನ್ನೂ ಸೇರಿಸಿಕೊಳ್ಳುವಂತೆ ಸಚಿವರಿಗೆ ಪ್ರಧಾನಿ ಸೂಚಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com