ನವದೆಹಲಿ: ದೇಶದ ಕೆಲವು ಭಾಗಗಳಲ್ಲಿ ಈಗಲೂ ದೇವದಾಸಿ ಪದ್ಧತಿ ಅಸ್ತಿತ್ವದಲ್ಲಿದೆ ಎಂಬ ವರದಿಯಿಂದ ಅಚ್ಚರಿಗೊಳಗಾಗಿರುವ ಕೇಂದ್ರ ಗೃಹ ಸಚಿವಾಲಯ, ಈ ಹೀನಾಯ ಪದ್ಧತಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.
ದೇವದಾಸಿ ಅಮಾನವೀಯ ಪದ್ಧತಿಯಾಗಿದ್ದು, ಮಹಿಳೆಯರ ಘನತೆಗೆ ಕುಂದುತರುವ ವಿಚಾರ. ಇದರ ವಿರುದ್ಧದ ಕಾನೂನನ್ನು ಸಮರ್ಥವಾಗಿ ಅನುಷ್ಠಾನ ಮಾಡಿ, ಸಂತ್ರಸ್ತರಿಗೆ ಪುನರ್ವ ಸತಿ ಕಲ್ಪಿಸಿ ಎಂದು ಎಲ್ಲ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಸಚಿವಾಲಯ ಪತ್ರ ಬರೆದಿದೆ.