ನವದೆಹಲಿ: ತೈಲ ಮತ್ತು ನೈಸರ್ಗಿಕ ಅನಿಲ ನಿಗಮ(ಒಎನ್ಜಿಸಿ)ಯ ತಾಂತ್ರಿಕ ನಿರ್ದೇಶಕ ಶಶಿ ಶಂಕರ್ ಅವರನ್ನು ಮಂಗಳವಾರ ಪೆಟ್ರೋಲಿಯಂ ಇಲಾಖೆ ಅಮಾನತುಗೊಳಿಸಿದೆ.
ಗುತ್ತಿಗೆ ಅಕ್ರಮದ ಹಿನ್ನಲೆಯಲ್ಲಿ ಶಶಿ ಶಂಕರ್ ಅವರನ್ನು ಪೆಟ್ರೋಲಿಯಂ ಇಲಾಖೆ ಅಮಾನತುಗೊಳಿಸಿರುವ ಆದೇಶ ಹೊರಡಿಸಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ ವರ್ಷ ಫೆಬ್ರವರಿ 1 ರಂದು ತೈಲ ಮತ್ತು ನೈಸರ್ಗಿಕ ಅನಿಲ ನಿಗಮದ ನಿದೇರ್ಶಕರಾಗಿ ನೇಮಕಗೊಂಡಿದ್ದರು. ಗುತ್ತಿಗೆ ಅಕ್ರಮದಲ್ಲಿ ಅವರ ಹೆಸರು ಕೇಳಿ ಬಂದಿದ್ದು, ಅಮಾನತು ಮಾಡಲಾಗಿದೆ ಎಂದು ಇಲಾಖೆ ತಿಳಿಸಿದ್ದು, ಹೆಚ್ಚಿನ ಮಾಹಿತಿ ಇನ್ನು ಹೊರಬಿದ್ದಿಲ್ಲ.
Advertisement