ಚೆನ್ನೈ: ತಮಿಳುನಾಡಿನ ಮುಂದಿನ ಮುಖ್ಯಮಂತ್ರಿಯಾಗಬೇಕು ಎಂಬ ಡಿಎಂಕೆ ಪಕ್ಷದ ಸದಸ್ಯರ ಬೇಡಿಕೆಗೆ ಪ್ರತಿಕ್ರಯಿಸಿರುವ ಡಿಎಂಕೆ ಅಧ್ಯಕ್ಷ ಕರುಣಾನಿಧಿ ತಂಡಕ್ಕಾಗಿ ಮುಖ್ಯಮಂತ್ರಿಯಾಗುವ ಹಂಬಲ ಎನಗಿಲ್ಲ ಎಂದು ಹೇಳಿದ್ದಾರೆ.
ಜನರ ಸೇವೆ ಮಾಡಲು, ಪಕ್ಷದ ಕಾರ್ಯಕರ್ತರಿಗೆ ಉತ್ತೇಜನ ನೀಡುವುದು ಮತ್ತು ಪಕ್ಷದ ಸದಸ್ಯರನ್ನು ಕಾಪಾಡಿಕೊಳ್ಳುವುದೇ ನನ್ನ ಉದ್ದೇಶವಾಗಿದೆ ಹೊರತು, ಮುಖ್ಯಮಂತ್ರಿ ಪಟ್ಟದ ಬಗ್ಗೆ ಆಸೆ ಇಲ್ಲ ಎಂದು ಕರುಣಾನಿಧಿ ತಿಳಿಸಿದ್ದಾರೆ.
ತಮ್ಮ 63ನೇ ಹುಟ್ಟು ಹಬ್ಬದ ಸಮಾರಂಭದಲ್ಲಿ ಡಿಎಂಕೆ ಪಕ್ಷದ ಸದಸ್ಯರು ನನ್ನನ್ನು ಮುಂದಿನ ಮುಖ್ಯಮಂತ್ರಿಯಾಗಬೇಕು ಎಂದು ಒತ್ತಾಯಿಸಿದರು. ಆದರೆ ನನಗೆ ಮುಖ್ಯಮಂತ್ರಿಯಾಗಬೇಕು ಎಂಬ ಯಾವುದೇ ಆಸೆಗಳಿಲ್ಲ. ನನ್ನ ಆಸೆ ಒಂದೇ, ಅದು ಪಕ್ಷದ ಬೆಂಬಲವಾಗಿ ನಿಂತು, ನಮ್ಮವರ ರಕ್ಷಣೆ ಮಾಡುವುದು ಹಾಗೂ ಶತ್ರುಗಳಿಂದ ಪಕ್ಷವನ್ನು ರಕ್ಷಿಸಿವುದು ಎಂದು ಕರಣಾನಿಧಿ ಹೇಳಿದ್ದಾರೆ.
Advertisement