ನವದೆಹಲಿ: `ಮೋದಿಯೆಂದರೆ ನನಗೆ ಅಲರ್ಜಿ. ಹಾಗಾಗಿ ಭೂಸ್ವಾಧೀನ ವಿಧೇಯಕದ ಬಗ್ಗೆ ಅವರೊಂದಿಗೆ ಮಾತಾಡುವ ಅಗತ್ಯ ನನಗಿಲ್ಲ.' ಇದು ವಿಧೇಯಕ ವಿರುದ್ಧ ಪ್ರತಿಭಟಿಸುತ್ತಿರುವ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಹೇಳಿಕೆ.
ವಿಧೇಯಕದಲ್ಲಿರುವ ರೈತ ವಿರೋಧಿ ಧೋರಣೆ ಮತ್ತು ಇತರ ಆಕ್ಷೇಪಾರ್ಹ ಅಂಶಗಳಲ್ಲಿ ಬದಲು ಮಾಡುವವರೆಗೆ ತಮ್ಮ ನಿಲುವಿನಲ್ಲಿ ಬದಲಾವಣೆಗಳಿರುವುದಿಲ್ಲ ಎಂದರು. ವಿಧೇಯಕದಲ್ಲಿ ಬದಲಾವಣೆ ತರಲು ಕೇಂದ್ರದ ಮೇಲೆ ಒತ್ತಡ ಹೇರುವ ದೃಷ್ಟಿಯಿಂದ ಮಹಾರಾಷ್ಟ್ರದ ವರದಾದಿಂದ ದೆಹಲಿಯವರೆಗೆ 3 ತಿಂಗಳ ಪಾದಯಾತ್ರೆಗೂ ಶೀಘ್ರವೇ ಅಣ್ಣಾ ಚಾಲನೆ ನೀಡಲಿದ್ದಾರೆ.
Advertisement