ತಾಕತ್ತಿದ್ದರೆ ಮಸೀದಿ, ಚರ್ಚ್ ಮುಟ್ಟಿ

ರಾಜ್ಯ ಸರ್ಕಾರಕ್ಕೆ ವಿಹಿಂಪ ಅಧ್ಯಕ್ಷ ಪ್ರವೀಣ್ ತೊಗೊಡಿಯಾ ಸವಾಲು
ರಾಜ್ಯ ಸರ್ಕಾರದ ವಿರುದ್ಧ ಪ್ರವೀಣ್ ತೊಗೊಡಿಯಾ ಆಕ್ರೋಶ
ರಾಜ್ಯ ಸರ್ಕಾರದ ವಿರುದ್ಧ ಪ್ರವೀಣ್ ತೊಗೊಡಿಯಾ ಆಕ್ರೋಶ
Updated on

ಮಡಿಕೇರಿ: ಮಠಮಂದಿರಗಳ ಆಡಳಿತವನ್ನು ಸ್ವಾಧೀನ ಪಡಿಸಿಕೊಳ್ಳಲು ಮುಂದಾಗಿರುವ ಕರ್ನಾಟಕ ಸರ್ಕಾರ ತಾಕತ್ತಿದ್ದರೆ ಮಸೀದಿ, ಚರ್ಚ್‌ಗಳ ಆಡಳಿತವನ್ನೂ ಸ್ವಾಧಿನ ಪಡಿಸಿಕೊಳ್ಳಲಿ ಎಂದು ವಿಶ್ವ ಹಿಂದೂ ಪರಿಷತ್ ಅಂತಾರಾಷ್ಟ್ರೀಯ ಅಧ್ಯಕ್ಷ ಪ್ರವೀಣ್ ತೊಗೊಡಿಯಾ ಸವಾಲು ಹಾಕಿದರು.

ವಿಶ್ವ ಹಿಂದೂ ಪರಿಷತ್‌ನ ಸುವರ್ಣ ಸಂಭ್ರಮದ ಪ್ರಯುಕ್ತ ಗೋಣಿಕೊಪ್ಪಲಿನಲ್ಲಿ ಶುಕ್ರವಾರ ಹಿಂದೂ ಸಂಘಟನೆಗಳು ಆಯೋಜಿಸಿದ್ದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ಮಠ ಮಂದಿರಗಳ ಸ್ವಾಧೀನಕ್ಕೆ ಮುಂದಾಗಿರುವ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸಂಭ್ರಮದ ಹಬ್ಬ: ಯಾವಾಗ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗುತ್ತದೆಯೋ ಆಗಲೇ ಹಿಂದೂಗಳಿಗೆ ಸಂಭ್ರಮದ ಹಬ್ಬ. ಎಲ್ಲಿಯವರೆಗೆ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣದ ಕನಸು ಸಾಕಾರವಾಗುವುದಿಲ್ಲವೋ, ಎಲ್ಲಿಯವರೆಗೆ ಕಾಶ್ಮೀರದಲ್ಲಿ ಹಿಂದೂಗಳ ಮೇಲೆ ಭಯೋತ್ಪಾದಕರ ಅಟ್ಟಹಾಸ ನಿಲ್ಲುವುದಿಲ್ಲವೋ, ಎಲ್ಲಿಯವರೆಗೆ ಲಾಹೋರ್‌ನಲ್ಲಿ ಭಗವಾದ್ವಜ ಹಾರುವುದಿಲ್ಲವೋ ಅಲ್ಲಿಯವರೆಗೆ ಹಿಂದೂಗಳು ಸಂಭ್ರಮ ಪಡುವಂತಿಲ್ಲ ಎಂದು ಹೇಳಿದರು.

ವಿಶ್ವ ಹಿಂದೂ ಪರಿಷತ್ ವತಿಯಿಂದ ದೇಶದ 53 ಸಾವಿರು ಗ್ರಾಮಗಳಲ್ಲಿ 20 ಲಕ್ಷ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಪ್ರತಿ ಕುಟುಂಬಕ್ಕೂ ವೈದ್ಯ ಎಂಬ ಯೋಜನೆ ಜಾರಿಗೆ ತರಲಾಗುತ್ತಿದೆ.

ಈಗಾಗಲೇ 5000 ವೈದ್ಯರು ನಿತ್ಯ ತಮ್ಮಲ್ಲಿಗೆ ಬರುವ ಒಬ್ಬ ಬಡರೋಗಿಗೆ ಉಚಿತ ಚಿಕಿತ್ಸೆ ನೀಡುವ ಯೋಜನೆ ಜಾರಿಯಲ್ಲಿದ್ದು ವರ್ಷಕ್ಕೆ 1 ಕೋಟಿ ಬಡರೋಗಿಗಳಿಗೆ ಚಿಕಿತ್ಸೆ ದೊರಕುತ್ತಿದೆ. 2 ವರ್ಷಗಳಲ್ಲಿ ದೇಶವ್ಯಾಪಿ ಯೋಜನೆಯನ್ನು ಮತ್ತಷ್ಟು ಪ್ರಮಾಣದಲ್ಲಿ ಹೆಚ್ಚಿಸಲಾಗುವುದಾಗಿ ತೊಗಾಡಿಯ ವಿವರಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com