ಹರಿಯಾಣ: ವ್ಯಾನ್‌ಗೆ ರೈಲು ಡಿಕ್ಕಿ, 12 ಮಂದಿ ಸಾವು

ಹರಿಯಾಣದ ಹಿಸಾರ್‌ನ ಸರಸೋದ್ ಗ್ರಾಮದ ಬಳಿ ವ್ಯಾನ್‌ವೊಂದಕ್ಕೆ ರೈಲು ಡಿಕ್ಕಿ ಹೊಡೆದ ಪರಿಣಾಮ ವ್ಯಾನ್‌ನಲ್ಲಿದ್ದ 12 ಮಂದಿ ಮೃತಪಟ್ಟಿದ್ದಾರೆ.
ವ್ಯಾನ್‌ಗೆ ರೈಲು ಡಿಕ್ಕಿ
ವ್ಯಾನ್‌ಗೆ ರೈಲು ಡಿಕ್ಕಿ
Updated on

ಹಿಸಾರ್: ಹರಿಯಾಣದ ಹಿಸಾರ್‌ನ ಸರಸೋದ್ ಗ್ರಾಮದ ಬಳಿ ವ್ಯಾನ್‌ವೊಂದಕ್ಕೆ ರೈಲು ಡಿಕ್ಕಿ ಹೊಡೆದ ಪರಿಣಾಮ ವ್ಯಾನ್‌ನಲ್ಲಿದ್ದ 12 ಮಂದಿ ಮೃತಪಟ್ಟಿದ್ದಾರೆ.

ಇಂದು ಮುಂಜಾನೆ ದಟ್ಟ ಮಂಜು ಆವರಿಸಿದ್ದರಿಂದ ಸರಸೋದ್ ಗ್ರಾಮದ ಬಳಿ ಮಾನವರಹಿತ ರೇಲ್ವೆ ಕ್ರಾಸಿಂಗ್ ಬಳಿ ವ್ಯಾನ್‌ಗೆ ದುರಿ-ಸಿರ್ಸಾ ಪ್ಯಾಸೆಂಜರ್ ರೈಲು ಡಿಕ್ಕಿ ಹೊಡೆದಿದೆ ಪರಿಣಾಮ ನಾಲ್ವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ 12 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರಿಗೆ ಗಂಭೀರ ಗಾಯಗಳಾಗಿವೆ. ಗಾಯಗೊಂಡವರನ್ನು ಹಿಸಾರ್‌ನ ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ.

ಬಲಕ್ ಗ್ರಾಮದಲ್ಲಿ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಲುವಾಗಿ 15 ಮಂದಿ ಟಾಟಾ ಮ್ಯಾಜಿಕ್ ವಾಹನದಲ್ಲಿ ತೆರಳುತ್ತಿದ್ದರು ಎನ್ನಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com