ಗಡಿ ನುಸುಳುವ ಯತ್ನ ವಿಫಲ: ಭದ್ರತಾ ಪಡೆ ಗುಂಡಿಗೆ 3 ಉಗ್ರರ ಬಲಿ

ಉಗ್ರರ ಗಡಿ ನುಸುಳುವಿಕೆ ಯತ್ನವನ್ನು ಭಾರತೀಯ ಭದ್ರತಾ ಪಡೆಗಳು ವಿಫಲಗೊಳಿಸಿದ್ದು, ಮೂವರು ಉಗ್ರರನ್ನು ಬಡಿದುರುಳಿಸಿದ್ದಾರೆ...
ಭದ್ರತಾ ಪಡೆ
ಭದ್ರತಾ ಪಡೆ
ಶ್ರೀನಗರ: ಉಗ್ರರ ಗಡಿ ನುಸುಳುವ ಯತ್ನವನ್ನು ಭಾರತೀಯ ಭದ್ರತಾ ಪಡೆಗಳು ವಿಫಲಗೊಳಿಸಿದ್ದು, ಮೂವರು ಉಗ್ರರನ್ನು ಬಡಿದುರುಳಿಸಿದ್ದಾರೆ. 
ಕಾಶ್ಮೀರದ ಉರಿ ಸೆಕ್ಟರ್‌ನಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು ನಾಲ್ವರು ಉಗ್ರರನ್ನು ಹತ್ಯೆಗೈದಿದ್ದಾರೆ. ಸೇನಾಪಡೆಗಳು ಉಗ್ರರೊಂದಿಗೆ ಭಾರೀ ಗುಂಡಿನ ಕಾಳಗ  ನಡೆಸಿದ್ದು, ಈ ವೇಳೆ ನಾಲ್ವರು ಉಗ್ರರು ಹತರಾಗಿದ್ದಾರೆ ಎಂದು ಸೇನಾ ಮೂಲಗಳ ವರದಿ ತಿಳಿಸಿದೆ. 
ಗುಂಡಿನ ಚಕಮಕಿಯಲ್ಲಿ ಇಬ್ಬರು ಯೋಧರು ಗಾಯಗೊಂಡಿದ್ದು ,ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com