ಉಗ್ರನಿಗೆ ವಾಜಪೇಯಿ ಸರ್ಕಾರ ಸಹಾಯ: ಕಾಂಗ್ರೆಸ್ ಆರೋಪ

ಹಿಂದಿನ ಎನ್ ಡಿಎ ಸರ್ಕಾರ, ಹಿಜ್ ಬುಲ್ ಮುಜಾಹಿದ್ದೀನ್ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಸಯೀದ್ ಸಲಹುದ್ದೀನ್ ನ ಪುತ್ರನಿಗೆ ವೈದ್ಯಕೀಯ ಕೋರ್ಸ್ ಓದಲು ಸಹಾಯ ಮಾಡಿತ್ತು ಎಂದು ಕಾಂಗ್ರೆಸ್ ಆರೋಪಿಸಿದೆ...
ಉಗ್ರಗಾಮಿ ಸಯೀದ್ ಸಲಹುದ್ದೀನ್
ಉಗ್ರಗಾಮಿ ಸಯೀದ್ ಸಲಹುದ್ದೀನ್
Updated on

ನವದೆಹಲಿ: ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ ಆಡಳಿತಾವಧಿಯಲ್ಲಿ ಎನ್ ಡಿಎ ಸರ್ಕಾರ, ಹಿಜ್ ಬುಲ್ ಮುಜಾಹಿದ್ದೀನ್ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಸಯೀದ್ ಸಲಹುದ್ದೀನ್ ನ ಪುತ್ರನಿಗೆ ವೈದ್ಯಕೀಯ ಕೋರ್ಸ್ ಓದಲು ಸಹಾಯ ಮಾಡಿತ್ತು ಎಂದು ಕಾಂಗ್ರೆಸ್ ಆರೋಪಿಸಿದೆ.

ಒಂದು ಕಡೆ ನಮ್ಮ ಅನೇಕ ಸೈನಿಕರು ಸಲಹುದ್ದೀನ್ ನಂತಹ ಅಪಾಯಕಾರಿ ಭಯೋತ್ಪಾದಕರ ಕೈಯಲ್ಲಿ  ಸಾವನ್ನಪ್ಪಿದ್ದಾರೆ ಇನ್ನೊಂದೆಡೆ ಅದೇ ಭಯೋತ್ಪಾದಕನ ಪುತ್ರನಿಗೆ ಓದಲು ಎನ್ ಡಿಎ ಸರ್ಕಾರ ಸಹಾಯ ಮಾಡಿದೆ. ಇದರ ಅರ್ಥವೇನು? ಸಲಹುದ್ದೀನ್ ನ ಮಗನಿಗೆ ವೈದ್ಯಕೀಯ ಕೋರ್ಸ್ ಓದಲು ಸಹಾಯ ಮಾಡಿದ್ದೇಕೆ ಮತ್ತು ಅಂತಹ ಪ್ರಮುಖ ಉಗ್ರಗಾಮಿ ಜೊತೆ ರಾಜಿ ಮಾಡಿಕೊಂಡದ್ದೇಕೆ ಎಂಬುದನ್ನು ಬಿಜೆಪಿ ನಮಗೆ ತಿಳಿಸಬೇಕು ಎಂದು ಕಾಂಗ್ರೆಸ್ ನಾಯಕ ಅಜೊಯ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com