ಮೃತ ಪತ್ರಕರ್ತನ ಸಹೋದರಿಗೆ ಸರ್ಕಾರಿ ಉದ್ಯೋಗ; ಕೇಜ್ರಿವಾಲ್‌ ಭರವಸೆ

ವ್ಯಾಪಂ ಹಗರಣ ಸಂಬಂಧ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ ನರ್ಮತಾ ದಾಮೋರ್ ಅವರು ಪೋಷಕರ ಸಂದರ್ಶನ ಮಾಡಿ ಅಸಹಜವಾಗಿ ಸಾವನ್ನಪ್ಪಿರುವ ಟಿವಿ...
ಅರವಿಂದ್ ಕೇಜ್ರಿವಾಲ್(ಸಂಗ್ರಹ ಚಿತ್ರ)
ಅರವಿಂದ್ ಕೇಜ್ರಿವಾಲ್(ಸಂಗ್ರಹ ಚಿತ್ರ)
Updated on

ನವದೆಹಲಿ: ವ್ಯಾಪಂ ಹಗರಣ ಸಂಬಂಧ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ ನರ್ಮತಾ ದಾಮೋರ್ ಅವರು ಪೋಷಕರ ಸಂದರ್ಶನ ಮಾಡಿ ಅಸಹಜವಾಗಿ ಸಾವನ್ನಪ್ಪಿರುವ ಟಿವಿ ಪತ್ರಕರ್ತ ಅಕ್ಷಯ್ ಸಿಂಗ್ ಅವರ ಸಹೋದರಿಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸರ್ಕಾರಿ ಉದ್ಯೋಗ ನೀಡುವ ಭರವಸೆ ನೀಡಿದ್ದಾರೆ.

ಮೃತ ಟಿವಿ ಪತ್ರಕರ್ತ ಅಕ್ಷಯ್‌ ಸಿಂಗ್‌ನ ಮನೆಗೆ ಭೇಟಿ ನೀಡಿ ಸುಮಾರು ಒಂದು ಗಂಟೆ ಕಾಲ ಇದ್ದು ಆತನ ಕುಟುಂಬದವರಿಗೆ ಸಾಂತ್ವನ ಹೇಳಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಹಾಗೂ ಉಪ ಮುಖ್ಯಮಂತ್ರಿ ಮನೀಷ್‌ ಸಿಸೋಡಿಯ ಅಕ್ಷಯ್‌ ಸಿಂಗ್‌ನ ಸಹೋದರಿಗೆ ಸರ್ಕಾರಿ ಉದ್ಯೋಗದ ನೀಡುವ ಆಶ್ವಾಸನೆ ನೀಡಿದ್ದಾರೆ.

ಇದೇ ವೇಳೆ ಅರವಿಂದ್ ಕೇಜ್ರಿವಾಲ್ ಅವರು, ಅಕ್ಷಯ್‌ ಸಿಂಗ್‌ನ ಸಾವಿನ ಬಗ್ಗೆ ಸ್ವತಂತ್ರ ತನಿಖೆಗೆ ಒತ್ತಾಯಿಸಿದ್ದು, ಆತನ ಕುಟುಂಬಕ್ಕೆ ಪೂರ್ಣ ಪ್ರಮಾಣದ ಆರ್ಥಿಕ ನೆರವನ್ನು ನೀಡಲಾಗುವು ಎಂದು ಹೇಳಿದ್ದಾರೆ.

ಮನೆಗೆ ಹಿರಿಯ ಮಗನಾಗಿದ್ದ ಅಕ್ಷಯ್‌ ಸಿಂಗ್‌ ಕುಟುಂಬದ ಆಧಾರ ಸ್ತಂಭವಾಗಿದ್ದ. ಆತನ ಸಾವಿನಿಂದ ಆತನ ಕುಟುಂಬ ಧೃತಿಗೆಟ್ಟಿದೆ. ಆತನ ಸಹೋದರಿಗೆ ನಾವು ಉದ್ಯೋಗದ ಭರವಸೆ ನೀಡಿದ್ದೇವೆ ಎಂದು ಸಿಸೋಡಿಯ ಅವರು ಮಾಧ್ಯಮಕ್ಕೆ ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com