ಈಶಾನ್ಯ ರಾಜ್ಯಗಳ ದಂಗೆ ಕಾನೂನು ಮೇಲೆ ಪರಿಣಾಮ:ರಾಜನಾಥ್ ಸಿಂಗ್

ಈಶಾನ್ಯ ರಾಜ್ಯಗಳಲ್ಲಿ ದೀರ್ಘಕಾಲದ ಬಂಡಾಯ ಕಾನೂನು ಪದ್ಧತಿ ಮೇಲೆ ಪರಿಣಾಮ ಬೀರಿದೆ ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ...
ಗೃಹ ಸಚಿವ ರಾಜನಾಥ್ ಸಿಂಗ್ ಗುವಾಹಟಿಯಲ್ಲಿ ಈಶಾನ್ಯ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯಲ್ಲಿ ಭಾಗವಹಿಸಿದ್ದರು
ಗೃಹ ಸಚಿವ ರಾಜನಾಥ್ ಸಿಂಗ್ ಗುವಾಹಟಿಯಲ್ಲಿ ಈಶಾನ್ಯ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯಲ್ಲಿ ಭಾಗವಹಿಸಿದ್ದರು

ನವದೆಹಲಿ:ಈಶಾನ್ಯ ರಾಜ್ಯಗಳಲ್ಲಿ  ದೀರ್ಘಕಾಲದ ಬಂಡಾಯ  ಕಾನೂನು ಪದ್ಧತಿ ಮೇಲೆ ಪರಿಣಾಮ ಬೀರಿದ್ದು,ಅಪರಾಧಿಗಳಿಗೆ ಶಿಕ್ಷೆ ನೀಡುವ ಪ್ರಮಾಣ ಬೇರೆ ರಾಜ್ಯಗಳಿಗೆ ಹೋಲಿಸಿದರೆ ತೀರಾ ಕಡಿಮೆಯಾಗಿದೆ. ಬೇರೆ ರಾಜ್ಯಗಳಲ್ಲಿ ಶೇಕಡಾ 85ರಷ್ಟಿದ್ದರೆ ಇಲ್ಲಿ ಅಪರಾಧಿಗಳಿಗೆ ಶಿಕ್ಷೆಯಾದ ಪ್ರಮಾಣ ಶೇಕಡಾ 5ರಷ್ಟು ಮಾತ್ರ ಇದೆ  ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಅವರು ಶನಿವಾರ ಗುವಾಹಟಿಯಲ್ಲಿ ಈಶಾನ್ಯ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈಶಾನ್ಯ ರಾಜ್ಯಗಳ ಜನತೆಗೆ ಭದ್ರತೆಯನ್ನು ಒದಗಿಸಲು ಸೂಕ್ತ ಕ್ರಮ ಕೈಗೊಳ್ಳುವ ಸಮಯ ಬಂದಿದೆ. ದಂಗೆ, ಗಲಭೆಯ ಸಮಸ್ಯೆಯಿಂದ ಇಲ್ಲಿನ ಜನರು ಸಾಕಷ್ಟು ನೊಂದು ಹೋಗಿದ್ದಾರೆ.ಅವರಿಗೆ ಈಗ ಶಾಂತಿ ಬೇಕಾಗಿದೆ ಎಂದು ನುಡಿದರು.

ಜನರಿಗೆ ಕಾನೂನುಬದ್ಧವಾಗಿ ಎಲ್ಲಿ ಶಾಂತಿ, ನ್ಯಾಯ ಸಿಗುವುದಿಲ್ಲವೋ ಆಗ ಅವರು ಬೇರೆ ದಾರಿ ಹುಡುಕುತ್ತಾರೆ. ಇದರಿಂದ ವಾತಾವರಣ ಮತ್ತಷ್ಟು ಹದಗೆಡುತ್ತದೆ. ಸುವ್ಯವಸ್ಥೆ ಕಾನೂನು ಪಾಲನೆಗೆ ಈಶಾನ್ಯ ರಾಜ್ಯಗಳ ಮುಖ್ಯಮಂತ್ರಿಗಳು, ಪೊಲೀಸರು ಮತ್ತು ನ್ಯಾಯಾಲಯಗಳು ದಿಟ್ಟ ಕ್ರಮ ಕೈಗೊಳ್ಳಬೇಕಿದೆ ಎಂದು ರಾಜನಾಥ್ ಸಿಂಗ್ ಒತ್ತಾಯಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com