ಮುಂಬೈ: ಮುಂಬೈ ಪುಣೆ ಎಕ್ಸ್ಪ್ರೆಸ್ ವೇಯಲ್ಲಿ ಮಣ್ಣು ಕುಸಿತದ ಪರಿಣಾಮ ಭಾನುವಾರ ಬೆಳಗ್ಗೆ ಮೂವರು ಸಾವನ್ನಪ್ಪಿದ ಘಟನೆ ಬಗ್ಗೆ ವರದಿಯಾಗಿದೆ. ಪ್ರಸ್ತುತ ದಾರಿಯಲ್ಲಿ ಮಣ್ಣು ಕುಸಿದ ಕಾರಣ ಆ ದಾರಿಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ.
ಲೋನಾವಾಲ ಬಳಿಯ ಅಧೋಶಿ ಸುರಂಗ ಬಳಿ ಮಣ್ಣು ಕುಸಿದು ಬಿದ್ದಿತ್ತು. ಎಕ್ಸ್ಪ್ರೆಸ್ ವೇ ಇಕ್ಕೆಲದಲ್ಲಿ ಮಣ್ಣು ಕುಸಿಯದಂತೆ ತಡೆಹಿಡಿದಿದ್ದ ಕಬ್ಬಿಣದ ರಾಡ್ಗಳು ಹಳತಾಗಿದ್ದರಿಂದ ಈ ರೀತಿ ಮಣ್ಣು ಕುಸಿತವುಂಟಾಗಿದೆ ಎಂದು ಹೇಳಲಾಗುತ್ತಿದೆ.
ಎಕ್ಸ್ಪ್ರೆಸ್ವೇಯಲ್ಲಿ ಸಂಚಾರ ನಿಷೇಧಿಸಿರುವುದರಿಂದ ಹಳೆ ಮುಂಬೈ- ಪುಣೆ ರಸ್ತೆ ಬಳಸುವಂತೆ ಪೊಲೀಸರು ವಾಹನ ಸವಾರರಲ್ಲಿ ಮನವಿ ಮಾಡಿದ್ದಾರೆ.
Advertisement