ಐಪಿಎಸ್ ಅಧಿಕಾರಿ ಠಾಕೂರ್ ಗೆ ಖೇಮ್ಕಾ ನೈತಿಕ ಬೆಂಬಲ

ಉತ್ತರಪ್ರದೇಶದ ಎಸ್ಪಿ ಸರ್ಕಾರದೊಂದಿಗಿನ ಸೆಣಸಾಟದಲ್ಲಿ ಸಿಲುಕಿರುವ ಐಪಿಎಸ್ ಅಧಿಕಾರಿ ಅಮಿತಾಭ್ ಠಾಕೂರ್ ಗೆ ಹರ್ಯಾಣದ...
ಅಮಿತಾಭ್ ಠಾಕೂರ್
ಅಮಿತಾಭ್ ಠಾಕೂರ್
Updated on

ಲಖನೌ: ಉತ್ತರಪ್ರದೇಶದ ಎಸ್ಪಿ ಸರ್ಕಾರದೊಂದಿಗಿನ ಸೆಣಸಾಟದಲ್ಲಿ ಸಿಲುಕಿರುವ ಐಪಿಎಸ್ ಅಧಿಕಾರಿ ಅಮಿತಾಭ್ ಠಾಕೂರ್ ಗೆ ಹರ್ಯಾಣದ ಐಎಎಸ್ ಅಧಿಕಾರಿ ಅಶೋಕ್ ಖೇಮ್ಕಾ ಹಾಗೂ ಐಎಪಿಎಸ್ ಅಧಿಕಾರಿ ಸಂಜೀವ್ ಚತುರ್ವೇದಿ ಅವರು ನೈತಿಕ ಬೆಂಬಲ ಘೋಷಿಸಿದ್ದಾರೆ.

ಠಾಕೂರ್ ಗೆ ಕರೆ ಮಾಡಿರುವ ಇವರು, ``ನ್ಯಾಯಕ್ಕಾಗಿ ನೀವು ಮಾಡುತ್ತಿರುವ ಹೋರಾಟಕ್ಕೆ ನಮ್ಮ ನೈತಿಕ ಬೆಂಬಲವಿದೆ'' ಎಂದಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಠಾಕೂರ್, ಇವರ ಮಾತಿನಿಂದ ನನಗೆ ಇನ್ನಷ್ಟು ಧೈರ್ಯ ಬಂದಿದೆ ಎಂದಿದ್ದಾರೆ. ಇದೇ ವೇಳೆ, ತಮ್ಮ ವಿರುದ್ಧ ಅತ್ಯಾಚಾರ ದೂರು ದಾಖಲಿಸಿರುವ ಮಹಿಳೆ ಸಚಿವ ಗಾಯತ್ರಿ ಪ್ರಜಾಪತಿ ಅವರ ಕೈಗೊಂಬೆ ಎಂದೂ ಆರೋಪಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com