ಐಪಿಎಸ್ ಅಧಿಕಾರಿ ಠಾಕೂರ್ ಗೆ ಖೇಮ್ಕಾ ನೈತಿಕ ಬೆಂಬಲ

ಉತ್ತರಪ್ರದೇಶದ ಎಸ್ಪಿ ಸರ್ಕಾರದೊಂದಿಗಿನ ಸೆಣಸಾಟದಲ್ಲಿ ಸಿಲುಕಿರುವ ಐಪಿಎಸ್ ಅಧಿಕಾರಿ ಅಮಿತಾಭ್ ಠಾಕೂರ್ ಗೆ ಹರ್ಯಾಣದ...
ಅಮಿತಾಭ್ ಠಾಕೂರ್
ಅಮಿತಾಭ್ ಠಾಕೂರ್

ಲಖನೌ: ಉತ್ತರಪ್ರದೇಶದ ಎಸ್ಪಿ ಸರ್ಕಾರದೊಂದಿಗಿನ ಸೆಣಸಾಟದಲ್ಲಿ ಸಿಲುಕಿರುವ ಐಪಿಎಸ್ ಅಧಿಕಾರಿ ಅಮಿತಾಭ್ ಠಾಕೂರ್ ಗೆ ಹರ್ಯಾಣದ ಐಎಎಸ್ ಅಧಿಕಾರಿ ಅಶೋಕ್ ಖೇಮ್ಕಾ ಹಾಗೂ ಐಎಪಿಎಸ್ ಅಧಿಕಾರಿ ಸಂಜೀವ್ ಚತುರ್ವೇದಿ ಅವರು ನೈತಿಕ ಬೆಂಬಲ ಘೋಷಿಸಿದ್ದಾರೆ.

ಠಾಕೂರ್ ಗೆ ಕರೆ ಮಾಡಿರುವ ಇವರು, ``ನ್ಯಾಯಕ್ಕಾಗಿ ನೀವು ಮಾಡುತ್ತಿರುವ ಹೋರಾಟಕ್ಕೆ ನಮ್ಮ ನೈತಿಕ ಬೆಂಬಲವಿದೆ'' ಎಂದಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಠಾಕೂರ್, ಇವರ ಮಾತಿನಿಂದ ನನಗೆ ಇನ್ನಷ್ಟು ಧೈರ್ಯ ಬಂದಿದೆ ಎಂದಿದ್ದಾರೆ. ಇದೇ ವೇಳೆ, ತಮ್ಮ ವಿರುದ್ಧ ಅತ್ಯಾಚಾರ ದೂರು ದಾಖಲಿಸಿರುವ ಮಹಿಳೆ ಸಚಿವ ಗಾಯತ್ರಿ ಪ್ರಜಾಪತಿ ಅವರ ಕೈಗೊಂಬೆ ಎಂದೂ ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com