ಅಕ್ರಮವಾಗಿ ಗಡಿ ನುಸುಳುತ್ತಿದ್ದ 3 ಉಗ್ರರನ್ನು ಹತ್ಯೆಗೈದ ಭದ್ರತಾ ಪಡೆ

ಅಕ್ರಮವಾಗಿ ಭಾರತದ ಗಡಿ ನಸುಳಲು ಯತ್ನಿಸುತ್ತಿದ್ದ ಮೂವರು ಉಗ್ರರನ್ನು ಭಾರತೀಯ ಸೇನಾ ಪಡೆ ಹತ್ಯೆಗೈದಿರುವ ಘಟನೆ ಜಮ್ಮು ವಿನ ಕುಪ್ವಾರ ಜಿಲ್ಲೆಯ ಟುಟ್‌ಮಾರ್‌ ಗಲಿ ಪ್ರದೇಶದಲ್ಲಿ ನಡೆದಿದೆ...
ಭದ್ರತಾ ಪಡೆ
ಭದ್ರತಾ ಪಡೆ
Updated on

ಶ್ರೀನಗರ: ಅಕ್ರಮವಾಗಿ ಭಾರತದ ಗಡಿ ನಸುಳಲು ಯತ್ನಿಸುತ್ತಿದ್ದ ಮೂವರು ಉಗ್ರರನ್ನು ಭಾರತೀಯ ಸೇನಾ ಪಡೆ ಹತ್ಯೆಗೈದಿರುವ ಘಟನೆ ಜಮ್ಮು ವಿನ ಕುಪ್ವಾರ ಜಿಲ್ಲೆಯ ಟುಟ್‌ಮಾರ್‌ ಗಲಿ ಪ್ರದೇಶದಲ್ಲಿ ನಡೆದಿದೆ.

ಉಗ್ರರು ಅಕ್ರಮವಾಗಿ ಗಡಿ ನುಸುಳಲು ಯತ್ನಿಸುತ್ತಿದ್ದ ವೇಳೆ ಸೇನಾ ಪಡೆ ದಾಳಿ ನಡೆಸಿ ನುಸುಳುವಿಕೆ ಯತ್ನವನ್ನು ವಿಫ‌ಲಗೊಳಿಸಿದೆ ಎಂದು ಸೇನಾ ಮೂಲಗಳು ತಿಳಿಸಿವೆ.

ಕಳೆದ ಎರಡು ವಾರಗಳಿಂದ ಇದು ಮೂರನೇ ಗಡಿ ನುಸುಳುವಿಕೆ ಯತ್ನವನ್ನು ಭಾರತೀಯ ಸೇನಾ ಪಡೆ ವಿಫಲಗೊಳಿಸಿದೆ. ಮೇ 25 ರಂದು ತಾಂಗ್‌ದಾರ್‌ ವಲಯದಲ್ಲಿ ಗಡಿ ನುಸುಳುತ್ತಿದ್ದ ನಾಲ್ವರು ಉಗ್ರರನ್ನು ಸೇನಾ ಪಡೆ ಹತ್ಯೆಗೈದಿತ್ತು,

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com