ಫತೇಪುರ್: ತೋಟಕ್ಕೆ ಮಾವಿನ ಹಣ್ಣು ಕೀಳಲು ಬಂದ್ದಿದ್ದ ನಾಲ್ವರನ್ನು ಪ್ರಶ್ನಿಸಿದ್ದಕ್ಕೆ ಮಾಲೀಕನ ಅಪ್ರಾಪ್ತ ವಯಸ್ಸಿನ ಮಗಳಿಗೆ ಬೆಂಕಿ ಹಚ್ಚಿ ಕೊಂದ ಅಮಾನವೀಯ ಘಟನೆ ಉತ್ತರ ಪ್ರದೇಶದ ಫತೇಪುರ್ ಜಿಲ್ಲೆಯಲ್ಲಿ ನಡೆದಿದೆ.
ನಾಲ್ವರು ವ್ಯಕ್ತಿಗಳು ಮಾವಿನ ತೋಟದಲ್ಲಿ ಹಣ್ಣು ಕೀಳುತ್ತಿದ್ದುದನ್ನು ಕಂಡ ಮಾಲೀಕ ಶಿವ ಭೂಷಣ್ ಶುಕ್ಲಾ ಪ್ರಶ್ನಿಸಿದ್ದಾರೆ. ಈ ಸಂದರ್ಭದಲ್ಲಿ ಮಾತಿನ ಚಕಮಕಿ ನಡೆದಿದೆ.
ಇದರಿಂದ ರೊಚ್ಚಿಗೆದ್ದ ನಾಲ್ವರು, ಯಾರೂ ಇಲ್ಲದ ವೇಳೆ ಶುಕ್ಲಾ ಮನೆಗೆ ನುಗ್ಗಿ 17ರ ಯುವತಿಗೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದು, ಬಾಗಿಲು ಹಾಕಿ ಪರಾರಿಯಾಗಿದ್ದಾರೆ.
Advertisement