ಯೋಗದ ಮಹತ್ವ ಸಾರಿದ ವಿಶ್ವಸಂಸ್ಥೆ ಕಾರ್ಯದರ್ಶಿ ಬಾನ್ ಕೀ ಮೂನ್

ಜೂನ್ 21 ರಂದು ಜಗತ್ತಿನಾದ್ಯಂತ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಭಾರತದ ಪುರಾತನ ಯೋಗ ಪದ್ಧತಿ ಕುರಿತಂತೆ ವಿಶ್ವಸಂಸ್ಥೆ ಮಹಾ...
ಬಾನ್ ಕೀ ಮೂನ್
ಬಾನ್ ಕೀ ಮೂನ್

ನವದೆಹಲಿ: ಜೂನ್ 21 ರಂದು ಜಗತ್ತಿನಾದ್ಯಂತ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಭಾರತದ ಪುರಾತನ ಯೋಗ ಪದ್ಧತಿ ಕುರಿತಂತೆ ವಿಶ್ವಸಂಸ್ಥೆ ಮಹಾ ಕಾರ್ಯದರ್ಶಿ ಬಾನ್ ಕೀ ಮೂನ್ ಅವರು ಯೋಗ ಎಂಬುದು ಮನಸ್ಸಿಗೆ ಶಾಂತಿ, ನೆಮ್ಮದಿ ನೀಡುತ್ತದೆ ಎಂದಿದ್ದಾರೆ.

ಯೋಗ ಮಾಡುವ ಮೂಲಕ ದೈಹಿಕ ಆರೋಗ್ಯ ಹಾಗೂ ಮನಸ್ಥಿತಿ ಸುಧಾರಿಸುತ್ತದೆ ಹೀಗಾಗಿ ಇದರಲ್ಲಿ ಧರ್ಮ ರಾಜಕೀಯ ಬೇಡ ಯೋಗ ಕುರಿತು ತಾರತಮ್ಯ ಸರಿಯಲ್ಲ ಎಂದಿರುವ ಬಾನ್ ಕೀ ಮೂನ್ ಹೇಳಿದ್ದಾರೆ. ಅಲ್ಲದೆ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕೆಲವೊಂದು ಯೋಗಾಸನ ಮಾಡಿದ್ದು ಅದರಿಂದ ನನಗೆ ತೃಪ್ತಿ ಸಿಕ್ಕಿದ್ದು, ಯೋಗವನ್ನು ಯಾರು ಬೇಕಾದರೂ ಮಾಡಬಹುದು ಇದಕ್ಕೆ ಯಾವುದೇ ಧರ್ಮದ ಕಟ್ಟುಪಾಡುಗಳಿಲ್ಲ ಎಂದು ತಿಳಿಸಿದ್ದಾರೆ.

ಯೋಗ ಎಂಬುದು ಯಾವುದೇ ತಾರತಮ್ಯ ಸೃಷ್ಟಿಸುವುದಿಲ್ಲ, ವಯಸ್ಸು, ಸಾಮರ್ಥ್ಯದ ಭೇದವಿಲ್ಲದಂತೆ ಎಲ್ಲರೂ ಯೋಗ ತರಬೇತಿ ಪಡೆಯಬಹುದಾಗಿದ್ದು  ನನ್ನ ಮೊದಲ ಆಸನದಲ್ಲೇ ಯೋಗದ ಮಹತ್ವವನ್ನ ಅರಿತಿದ್ದೇನೆ ಎಂದಿರುವ ಮೂನ್  ಮೊದಲ ಬಾರಿ ಯೋಗ ಕಲಿಯುತ್ತಿರುವವರಿಗೆ ವೃಕ್ಷಾಸನ ಉತ್ತಮವಾದದ್ದು ಎಂಬ ಕಿವಿಮಾತನ್ನು ಹೇಳಿದ್ದಾರೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com