ಪಪ್ಪು ಯಾದವ್ ವಿರುದ್ಧ ಗಗನಸಖಿಗೆ ಚಪ್ಪಲಿಯಿಂದ ಹೊಡೆಯುವ ಬೆದರಿಕೆ ಆರೋಪ

ಆರ್‌ಜೆಡಿಯ ಉಚ್ಛಾಟಿತ ಸಂಸದ ಪಪ್ಪು ಯಾದವ್‌ ನನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ್ದಲ್ಲದೆ, ಚಪ್ಪಲಿಯಿಂದ ಹೊಡೆಯುವುದಾಗಿ ಬೆದರಿಸಿದ್ದಾರೆ ಎಂದು ಜೆಟ್‌ ಏರ್‌ವೇಸ್‌...
ಪಪ್ಪು ಯಾದವ್
ಪಪ್ಪು ಯಾದವ್
Updated on

ನವದೆಹಲಿ: ಆರ್‌ಜೆಡಿಯ ಉಚ್ಛಾಟಿತ ಸಂಸದ ಪಪ್ಪು ಯಾದವ್‌ ನನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ್ದಲ್ಲದೆ, ಚಪ್ಪಲಿಯಿಂದ ಹೊಡೆಯುವುದಾಗಿ ಬೆದರಿಸಿದ್ದಾರೆ ಎಂದು ಜೆಟ್‌ ಏರ್‌ವೇಸ್‌ ವಿಮಾನದ ಗಗನಸಖಿಯೊಬ್ಬರು ದೂರು ನೀಡಿದ್ದಾರೆ.

ಪಟ್ನಾದಿಂದ ದೆಹಲಿಗೆ ಹೊರಟಿದ್ದ ವಿಮಾನದಲ್ಲಿ ಪಪ್ಪು ಯಾದವ್‌ ಪ್ರಯಾಣಿಸುತ್ತಿದ್ದರು. ಪ್ರಯಾಣದ ಆರಂಭದಿಂದಲೇ ಪಪ್ಪು ಯಾದವ್‌ ಅನುಚಿತವಾಗಿ ವರ್ತಿಸುತ್ತಿದ್ದರು.

ವಿಮಾನ ಪ್ರಯಾಣದ ಸುರಕ್ಷಾ ಮಾರ್ಗಸೂಚಿಗಳನ್ನೂ ಅವರು ಅನುಸರಿಸುತ್ತಿರಲಿಲ್ಲ. ಚೆಲ್ಲಿದ ತಿನಿಸು ಶುಚಿಗೊಳಿಸುವಂತೆ ಕಾಲಿನಿಂದ ತೋರಿಸಿದರು. ಈ ಕೆಲಸವನ್ನು ಗಗನಸಖಿಯರೇ ಮಾಡಬೇಕು. ಒಂದು ವೇಳೆ ತಾವು ಹೇಳಿದ ಕೆಲಸವನ್ನು ಮಾಡದಿದ್ದರೆ ಚಪ್ಪಲಿಯಿಂದ ಹೊಡೆಯುವುದಾಗಿ ಬೆದರಿಕೆ ಹಾಕಿ ನನ್ನನ್ನು ಎಳೆದಾಡಿದರು ಎಂದು ಗಗನಸಖಿ ದೂರಿನಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com