ನವದೆಹಲಿ: ಏರ್ಸೆಲ್ ಮ್ಯಾಕ್ಸಿಸ್ ಪ್ರಕರಣ ಸಂಬಂಧ ಮಾಜಿ ಟೆಲಿಕಾಂ ಸಚಿವ ದಯಾನಿಧಿ ಮಾರನ್ ಹಾಗೂ ಅವರ ಸಹೋದರ ಕಲಾನಿಧಿ ಮಾರನ್ ಅವರು ಸೋಮವಾರ ವಿಶೇಷ 2ಜಿ ಕೋರ್ಟ್ ಮುಂದೆ ವಿಚಾರಣೆಗೆ ಹಾಜರಾದರು.
ಸಮನ್ಸ್ ಹಿನ್ನೆಲೆಯಲ್ಲಿ ಇಂದು ಸಿಬಿಐ ವಿಶೇಷ ಕೋರ್ಟ್ ನ್ಯಾಯಾಧೀಶ ಓ.ಪಿ.ಸಾಯಿನಿ ಅವರ ಮುಂದೆ ವಿಚಾರಣೆ ಹಾಜರಾದ ಮಾರನ್ ಸಹೋದರರು, ಜಾಮೀನು ಕೋರಿ ಅರ್ಜಿ ಸಲ್ಲಿಸಿದರು. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಜಾಮೀನು ನೀಡುವ ಕುರಿತು ಮಾರ್ಚ್ 16ರಂದು ಉತ್ತರಿಸುವಂತೆ ಸಿಬಿಐಗೆ ಸೂಚಿಸಿತು.
ಇದೇ ಪ್ರಕರಣದಲ್ಲಿ ಮಾರಿಷಸ್ನಲ್ಲಿರುವ ಇನ್ನೋರ್ವ ಆರೋಪಿಗೂ ಸಮನ್ಸ್ ಅನ್ನು ತಲುಪಿಸಲಾಗಿದೆ, ಆದರೆ ಅವರಿಂದ ಈ ತನಕ ಯಾವುದೇ ಉತ್ತರ ಬಂದಿಲ್ಲ ಎಂದು ಸಿಬಿಐ ಪ್ರಾಸಿಕ್ಯೂಟರ್ ಕೆ ಕೆ ಗೋಯಲ್ ಗೋಯಲ್ ಕೋರ್ಟಿಗೆ ತಿಳಿಸಿದರು.
Advertisement