ಸಿಗಲಿ ಸಮಪಾಲು, ಸಮಬಾಳು

ತಮಿಳರೂ ಸೇರಿದಂತೆ ಶ್ರೀಲಂಕಾದಲ್ಲಿ ಎಲ್ಲ ಪ್ರಜೆಗಳು ಸಮಾನರಾಗಿ ಬದುಕಬೇಕು. ಹೀಗೆಂದು ಆಶಯ ವ್ಯಕ್ತಪಡಿಸಿದ್ದು ಪ್ರಧಾನಿ ನರೇಂದ್ರ...
ನರೇಂದ್ರ ಮೋದಿ (ಚಿತ್ರ ಕೃಪೆ : AP)
ನರೇಂದ್ರ ಮೋದಿ (ಚಿತ್ರ ಕೃಪೆ : AP)
Updated on

ಜಾಫನಾ /ಕೊಲಂಬೋ: ತಮಿಳರೂ ಸೇರಿದಂತೆ ಶ್ರೀಲಂಕಾದಲ್ಲಿ ಎಲ್ಲ ಪ್ರಜೆಗಳು ಸಮಾನರಾಗಿ ಬದುಕಬೇಕು. ಹೀಗೆಂದು ಆಶಯ ವ್ಯಕ್ತಪಡಿಸಿದ್ದು ಪ್ರಧಾನಿ ನರೇಂದ್ರ ಮೋದಿ. ದ್ವೀಪ ರಾಷ್ಟ್ರದ ಪ್ರವಾಸದ ಕೊನೆಯ ದಿನ ಜರ್ಜರಿತ ವಾಗಿದ್ದ ಜಾಫ್ನಾಗೆ ಭೇಟಿ ನೀಡಿದ ವೇಳೆ ಅವರು ಈ ಮಾತುಗಳನ್ನಾಡಿದ್ದಾರೆ. ಇದೇ ಸಂದರ್ಭ ದಲ್ಲಿ ಕೇಂದ್ರ ಸರ್ಕಾರದ ವತಿಯಿಂದ ನಿರ್ಮಿಸಲಾಗುವ ಸಾಂಸ್ಕೃತಿಕ ಕೇಂದ್ರಕ್ಕೆ ಶಿಲಾನ್ಯಾಸ ನೆರವೇರಿಸಿದರು ಪ್ರಧಾನಿ.
ಮನೆಗಳ ಹಸ್ತಾಂತರ: ಇಲ್ಲವಾಲೈ ಎಂಬಲ್ಲಿಆಂತರಿಕ ಯುದ್ಧದಿಂದ ನೊಂದಿರುವ ಕುಟುಂಬಗಳಿಗೆ ಭಾರತ ಸರ್ಕಾರದ ನೆರವಿನಿಂದ ನಿರ್ಮಿಸಲಾಗಿರುವ 27 ಸಾವಿರ
ಮನೆಗಳನ್ನು ಹಸ್ತಾಂತರಿಸಿದರು. ಪ್ರವಾಸದ ವೇಳೆ ಯುದ್ಧದಿಂದ ನೊಂದಿರುವ ಕುಟುಂಬ ಸದಸ್ಯರ ಜತೆ ಬಿಗುಮಾನ ಬಿಟ್ಟು ಪ್ರಧಾನಿ ಮೋದಿ ಬೆರೆತರು. ಈ ಮೂಲಕ ಅವರು ತಮ್ಮ ಸರಳತೆ ಮೆರೆದರು. ಜತೆಗೆ ಮುಂದಿನ ಹಂತದಲ್ಲಿ 47 ಸಾವಿರ ಮನೆಗಳ ನಿರ್ಮಾಣ ಮಾಡಲಾಗುತ್ತದೆ ಎಂದರು ನರೇಂದ್ರ ಮೋದಿ.

ರೈಲಿಗೆ ಚಾಲನೆ: ಆಂತರಿಕ ಯುದ್ಧದ ವೇಳೆ ಸಂಪೂರ್ಣ ನಾಶವಾಗಿ ಹೋಗಿದ್ದ ಜಾಫ್ನ ಪ್ರದೇಶದ ತಲೈಮುನ್ನಾರ್ ಪಿಯರ್-ಮಧು ರೋಡ್ ಎಂಬಲ್ಲಿಗೆ ಪುನರ್ ನಿರ್ಮಿಸಲಾಗಿರುವ ಬ್ರಾಡ್‍ಗೇಜ್ ರೈಲು ಮಾರ್ಗವನ್ನು ಮೋದಿ ಉದ್ಘಾಟಿಸಿದರು. ಕೇಂದ್ರ ಸರ್ಕಾರದ ನೆರವಿನಿಂದ ನಿರ್ಮಿಸಲಾಗಿರುವ 63 ಕಿಮೀ ದೂರದ ಈ ಯೋ ಜನೆಯನ್ನು ಶ್ರೀಲಂಕಾದ ಉತ್ತರ ರೈಲ್ವೆ ಪುನರ್ ನಿರ್ಮಾಣ ಯೋಜನೆ (ಎನ್ ಆರ್‍ಎಲ್‍ಆರ್‍ಪಿ) ವ್ಯಾಪ್ತಿಯಲ್ಲಿ ನಿರ್ಮಿಸಲಾಗಿದೆ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com