ನವದೆಹಲಿ: ಹೌದು, ರೈಲ್ವೆ ಸಚಿವಾಲಯದ ವಿವಿಧ ಹಂತಗಳಲ್ಲಿ ಭ್ರಷ್ಟಾಚಾರವಿದೆ. ಆದಷ್ಟು ಬೇಗ ಪಾರದರ್ಶಕತೆ ಮೂಲಕ ಭ್ರಷ್ಟಾಚಾರ ನಿವಾರಿಸುವ ಪ್ರಯತ್ನ ಮಾಡಲಾಗು ವುದು. ಹೀಗೆಂದು ಹೇಳಿರುವುದು ಸ್ವತಃ ರೈಲ್ವೆ ಸಚಿವ ಸುರೇಶ್ ಪ್ರಭು. ರೈಲ್ವೆ ಇಲಾಖೆಯಲ್ಲಿ ಭ್ರಷ್ಟಾಚಾರದ ಆರೋಪ ಬಗ್ಗೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಕೇಳಿಬರುತ್ತಿದೆ. ಇದರ ಪರಿಣಾಮ ಅದಾ ಗಲೇ ರೈಲ್ವೆ ಮಂಡಳಿಯ ಓರ್ವ ಸದಸ್ಯರನ್ನು ಅಮಾನತಿನಲ್ಲಿಡಲಾಗಿದೆ. ಈ ಬಗ್ಗೆ ಇನ್ನೂ ತಿದ್ದುಪಡಿಗಳಾಗಬೇಕಿದೆ ಎಂದರು. ಇನ್ನು ಅಕ್ರಮ ಕಂಡು ಬಂದಲ್ಲಿ ಸಾರ್ವಜನಿಕರು ನೇರವಾಗಿ ಆನ್ಲೈನ್ನಲ್ಲಿ ಮತ್ತು ಮೊಬೈಲ್ ಆ್ಯಪ್ ಮೂಲಕ ದೂರು ದಾಖಲಿಸಬಹುದು.
Advertisement