ಸೆಕ್ಷನ್66ಎ ತರುವ ಅವಶ್ಯಕತೆಯೇ ಇರಲಿಲ್ಲ: ಎಚ್.ಆರ್. ಭಾರದ್ವಾಜ್

ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಕಾರಣವೊಡ್ಡಿ ಸುಪ್ರೀಂಕೋರ್ಟ್‍ನಿಂದ ಗೇಟ್‍ಪಾಸ್ ಕೊಡಿಸಿಕೊಂಡ ಸೆಕ್ಷನ್ 66ಎ ಸಂಬಂಧ...
ಎಚ್.ಆರ್. ಭಾರದ್ವಾಜ್
ಎಚ್.ಆರ್. ಭಾರದ್ವಾಜ್
Updated on

ನವದೆಹಲಿ: ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಕಾರಣವೊಡ್ಡಿ ಸುಪ್ರೀಂಕೋರ್ಟ್‍ನಿಂದ ಗೇಟ್‍ಪಾಸ್ ಕೊಡಿಸಿಕೊಂಡ ಸೆಕ್ಷನ್ 66ಎ ಸಂಬಂಧ ಕಾಂಗ್ರೆಸ್‍ನಲ್ಲೇ ಅಪಸ್ವರ ಕೇಳಿಬಂದಿದೆ. ಸೆಕ್ಷನ್ 66ಎ ತರುವ ಅವಶ್ಯಕತೆಯೇ ಇರಲಿಲ್ಲ ಎಂದು ಯುಪಿಎ ಮೊದಲ ಅವಧಿಯಲ್ಲಿ ಕಾನೂನು ಸಚಿವರಾಗಿದ್ದ ಮತ್ತು ಕರ್ನಾಟಕದ ಮಾಜಿ ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಬಾಂಬ್ ಸಿಡಿಸಿದ್ದಾರೆ.

ಈ ಕಾನೂನನ್ನು ತರುವ ಅಗತ್ಯವೇ ಇರಲಿಲ್ಲ, ಆದರೆ ತೀರಾ ಅವಸರವಸರವಾಗಿ ಇದನ್ನು ತಿದ್ದುಪಡಿ ಮಾಡಲಾಗಿತ್ತು ಎಂದು ಆರೋಪಿಸಿದ್ದಾರೆ. ಅಲ್ಲದೆ `ಕುಟುಂಬ'ವೊಂದನ್ನು ಕಾಪಾಡುವ ದೃಷ್ಟಿಯಿಂದ ಇದನ್ನು ತರಲಾಗಿತ್ತು ಎಂದೂ ಆಪಾದಿಸಿದ್ದಾರೆ. ಆದರೆ ಆಗ ಇದನ್ನು ತಂದ ಸಚಿವರ್ಯಾರು ಎಂಬುದು ನೆನಪಿಲ್ಲ ಎಂದೂ ಹೇಳಿದ್ದಾರೆ. ಅಲ್ಲದೆ ಕಾನೂನಿಗೆ ತಿದ್ದುಪಡಿ ಮಾಡುವ ಸಲುವಾಗಿ ಮಾಡಬೇಕಿದ್ದ ಯಾವುದೇ ಪ್ರಕ್ರಿಯೆಗಳನ್ನೂ ಪಾಲಿಸಿರಲಿಲ್ಲ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com