ಮೊಬೈಲ್ ನೋಡಿ ಸಂತಾಪ ಬರೆದ ರಾಹುಲ್!

ಇತ್ತೀಚೆಗೆ ಪ್ರತಿ ವಿಚಾರದಲ್ಲೂ ರಾಹುಲ್ ಅವರನ್ನು ಗೇಲಿ ಮಾಡುತ್ತಿರುವುದು ಹೆಚ್ಚಿದೆ. ಇದೇ ರೀತಿ ಮತ್ತೊಮ್ಮೆ ಅವರ ನಡೆಯೊಂದು ಭಾರಿ ಹಾಸ್ಯಾಸ್ಪದವಾಗಿ ಮಾರ್ಪಟ್ಟಿದೆ.
ರಾಹುಲ್ ಗಾಂಧಿ
ರಾಹುಲ್ ಗಾಂಧಿ
Updated on

ನವದೆಹಲಿ: ಇತ್ತೀಚೆಗೆ ಪ್ರತಿ ವಿಚಾರದಲ್ಲೂ ರಾಹುಲ್ ಅವರನ್ನು ಗೇಲಿ ಮಾಡುತ್ತಿರುವುದು ಹೆಚ್ಚಿದೆ. ಇದೇ ರೀತಿ ಮತ್ತೊಮ್ಮೆ  ಅವರ ನಡೆಯೊಂದು ಭಾರಿ ಹಾಸ್ಯಾಸ್ಪದವಾಗಿ ಮಾರ್ಪಟ್ಟಿದೆ.  ಅವರು ಶುಕ್ರವಾರ ನೇಪಾಳ ರಾಯಭಾರ ಕಚೇರಿಗೆ ತೆರಳಿ ಭೂಕಂಪದ ಸಂತ್ರಸ್ತರಿಗೆ  ಗೌರವ ಸಲ್ಲಿಸಿದ್ರು. ಆದರೆ  ಈ ವೇಳೆ ಸಂತಾಪ ಸೂಚನಾ ಸಂದೇಶ ಬರೆಯುವ ವೇಳೆ ಮೊಬೈಲ್ ನಲ್ಲಿದ್ದ,  ಬರಹವನ್ನು ನಕಲು ಮಾಡಿದ್ದು ಭಾರಿ ವಿವಾದಕ್ಕೆ  ಎಡೆಮಾಡಿಕೊಟ್ಟಿದೆ. ರಾಹುಲ್ ಅವರು ವಿಸಿಟರ್ಸ್ ಬುಕ್ ನಲ್ಲಿ ಬರೆಯಲು ಕೂತಾಗಲೇ ಮಾಧ್ಯಮಗಳು ಕ್ಯಾಮೆರಾಗಳು ಅವರು ಮೊಬೈಲ್ ನೋಡಿ, ನಕಲು ಮಾಡುತ್ತಿರುವುದನ್ನು ಸೆರೆ ಹಿಡಿದವೆ. ಈ ಘಟನೆಯು ಟ್ವೀಟರ್ ನಲ್ಲೂ ಪಪ್ಪು ಕಾಂಟ್ ರೈಟ್ ಸಾಲ ಎಂಬ ಹ್ಯಾಸ್ ಟ್ಯಾಗ್ ನಲ್ಲಿ ಹಾಸ್ಯಾಸ್ಪದವಾಗಿ ಮಾರ್ಪಟ್ಟಿತು.
ಶುಕ್ರವಾರ ನೇಪಾಳ ರಾಯಭಾರ ಕಚೇರಿಗೆ ತೆರಳಿದ್ದ ರಾಹುಲ್ ರಾಯಭಾರಿ ದೀಪ್ ಕುಮಾರ್ ಉಪಾಧ್ಯಾಯ್ ಅವರನ್ನು ಭೇಟಿಯಾಗಿದ್ದರು. ಕಳೆದ ವಾರ ವಿಶ್ವವು ನೇಪಾಳದಲ್ಲಿ ನಡೆದ ಭಯಾನಕ ದುರಂತವನ್ನು ಗಮನಿಸಿದೆ. ಕೆಲವು ಗಾಯಗಳು ಯಾವತ್ತೂ ಮಾಸಲ್ಲ. ಆದರೆ ನೇಪಾಳ ಕಷ್ಟಪಟ್ಟು ಮತ್ತೆ ದೇಶವನ್ನು ಕಟ್ಟುತ್ತಿದೆ. ಭಾರತದ ಜನತೆ ನಿಮ್ಮೊಂದಿಗೆ ಶಕ್ತಿ  ಮತ್ತು ಐಕ್ಯತೆಯಲ್ಲಿ ಸಾಥ್ ನೀಡಲಿದೆ. ಎಂದು ಅವರು ಸಂತಾಪ ಸೂಚನೆ ಪುಸ್ತಕದಲ್ಲಿ ಬರೆದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com