ನಾಗ್ಪುರ: ಕೇಂದ್ರ ಸಚಿವ ನಿತಿನ್ ಗಡ್ಕರಿಯವರ ದೆಹಲಿ ಬಂಗಲೆಯ ಕೈತೋಟ ಹಸಿರಿನಿಂದ ನಳನಳಿಸುತ್ತಿರುವುದರ ಹಿಂದಿನ ರಹಸ್ಯವೇನು ಗೊತ್ತೆ?
ಅವರು ತೋಟಕ್ಕೆ ನೀರಿನ ಬದಲಿಗೆ ತಮ್ಮ ಮೂತ್ರವನ್ನೇ ಹರಿಸಿ ಗಿಡಗಳನ್ನು ಪೋಷಿಸುತ್ತಿದ್ದಾರೆ. ಇದು ಗಾಳಿಸುದ್ದಿಯೋ ಕುಚೋದ್ಯವೋ ಅಲ್ಲ. ಅವರೇ ಬಹಿರಂಗಪಡಿಸಿದ ಸತ್ಯ. ನಾಗಪುರದಲ್ಲಿ ಸಮಾರಂಭವೊಂದರಲ್ಲಿ ಮಾತನಾಡುತ್ತ ಗಡ್ಕರಿ, ಮೂತ್ರದಂಥ ಅಗ್ಗದ ಗೊಬ್ಬರ ಇನ್ನೊಂದಿಲ್ಲ. ಹಾಗಾಗಿ ತಾವು ಪ್ರತಿದಿನ ತಮ್ಮ ಗಾರ್ಡನ್ನ ಗಿಡಗಳಿಗೆ ಮೂತ್ರಧಾರೆ ಎರೆಯುವುದಾಗಿ ಹೇಳಿಕೊಂಡು ಭಾರಿ ವಿವಾದಕ್ಕೆ ಎಡೆಮಾಡಿ ಕೊಟ್ಟಿದ್ದಾರೆ.
ಈಗಾಗಲೇ ಟ್ವಿಟರ್ ಮತ್ತು ಫೇಸ್ಬುಕ್ನಲ್ಲಿ ಈ ಹೇಳಿಕೆಗೆ ಅಪಾರ ಸಂಖ್ಯೆಯಲ್ಲಿ ವಿರೋಧಗಳು ಹರಿದು ಬಂದಿದ್ದು, ಗಡ್ಕರಿ ಮಾತು ಗೇಲಿಗೊಳಗಾಗಿದೆ. 50ಲೀಟರಿನ ಕ್ಯಾನಿನಲ್ಲಿ ತಮ್ಮ ಮೂತ್ರ ಶೇಖರಿಸಿಟ್ಟಿದ್ದ ಗಡ್ಕರಿ, ಅದನ್ನೇ ಗಿಡಗಳಿಗೆ ಹರಿಸಿದ್ದರಿಂದ, ಗಿಡಗಳ ಬೆಳವಣಿಗೆಯಲ್ಲಿ ವೇಗ ಕಂಡುಬಂದಿದೆ ಎಂದೂ ಅವರು ಸಮರ್ಥಿಸಿದ್ದಾರೆ.
Advertisement