ಕಲ್ಲಿದ್ದಲು ಹಗರಣ: ನವೀನ್‌ ಜಿಂದಾಲ್‌, ಮಾಜಿ ಸಿಎಂ ಮಧು ಕೋಡಾ ಸೇರಿ 13 ಆರೋಪಿಗಳಿಗೆ ಸಮನ್ಸ್‌

ಕಲ್ಲಿದ್ದಲು ಹಗರಣ ಸಂಬಂಧ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಮಧು ಕೋಡಾ ಹಾಗೂ ಕಾಂಗ್ರೆಸ್ ಮುಖಂಡರೂ ಆಗಿರುವ ಉದ್ಯಮಿ ನವೀನ್‌...
ಕಲ್ಲಿದ್ದಲು
ಕಲ್ಲಿದ್ದಲು

ನವದೆಹಲಿ: ಕಲ್ಲಿದ್ದಲು ಹಗರಣ ಸಂಬಂಧ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಮಧು ಕೋಡಾ ಹಾಗೂ ಕಾಂಗ್ರೆಸ್ ಮುಖಂಡರೂ ಆಗಿರುವ ಉದ್ಯಮಿ ನವೀನ್‌ ಜಿಂದಾಲ್‌ ಸೇರಿದಂತೆ 13 ಆರೋಪಿಗಳಿ ಸಿಬಿಐ ವಿಶೇಷ ನ್ಯಾಯಾಲಯ ಬುಧವಾರ ಸಮನ್ಸ್‌ ಜಾರಿಗೊಳಿಸಿದೆ.

ಜಾರ್ಖಂಡ್‌ನ ಅಮರಕೊಂಡ ಮುರ್ಗದಂಗಲ್ ಕಲ್ಲಿದ್ದಲ್ಲು ನಿಕ್ಷೇಪ ಹಂಚಿಕೆ ಪ್ರಕರಣ ಸಂಬಂಧ, ಮೇ 22 ರಂದು ಹಾಜರಾಗುವಂತೆ ಸೂಚಿಸಿ ಸಿಬಿಐ ವಿಶೇಷ ನ್ಯಾಯಾಧೀಶ ಭರತ್‌ ಪರಶಾರ್ ಅವರು ಸಮನ್ಸ್ ಜಾರಿಗೊಳಿಸಿದ್ದಾರೆ.

ಪ್ರಕರಣ ಸಂಬಂಧ ಏಪ್ರಿಲ್ 29ರಂದು ಸಿಬಿಐ ಸಲ್ಲಿಸಿದ್ದ ದೋಷಾರೋಪ ಪಟ್ಟಿಯನ್ನು ಆಧರಿಸಿ, ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಲಯ ಸಮನ್ಸ್ ನೀಡಿದೆ. ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ 120ಬಿ, 420 ಮತ್ತು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ವಿವಿಧ ಕಲಂಗಳಡಿ ಸಿಬಿಐ ದೋಷಾರೋಪ ಸಲ್ಲಿಸಿತ್ತು.

ಜಿಂದಾಲ್, ಕೋಡಾ ಅವರಲ್ಲದೇ ಯುಪಿಎ ಅವಧಿಯಲ್ಲಿ ಕಲ್ಲಿದ್ದಲು ಇಲಾಖೆಯ ರಾಜ್ಯ ಖಾತೆ ಸಚಿವರಾಗಿದ್ದ ದಾಸರಿ ನಾರಾಯಣರಾವ್, ಕಲ್ಲಿದ್ದಲು ಇಲಾಖೆ ಮಾಜಿ ಕಾರ್ಯದರ್ಶಿ ಎಚ್.ಸಿ.ಗುಪ್ತಾ, ಜ್ಞಾನ ಸ್ವರೂಪ್ ಗರ್ಗ್, ಸುರೇಶ್ ಸಿಂಘಾಲ್, ರಾಜೀವ್ ಜೈನ್, ಗಿರೀಶ್ ಕುಮಾರ್ ಸುನೆಜಾ, ಆರ್.ಕೆ.ಸರಫ್ ಹಾಗೂ ರಾಮಕೃಷ್ಣ ಪ್ರಸಾದ್ ಅವರಿಗೆ ಪಡೆದಿರುವ ಇತರೆ ಆರೋಪಿಗಳು. ಇದಲ್ಲದೇ, ಐದು ಕಂಪೆನಿಗಳಿಗೂ ಕೋರ್ಟ್ ಸಮನ್ಸ್ ಜಾರಿಗೊಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com