ಬಾಲ್ಯ ವಿವಾಹ ತಡೆದ ಜಾರ್ಖಂಡ್ ಸಿಎಂ ರಘುಬರ್ ದಾಸ್

ಪೋಷಕರ ಒತ್ತಾಯಕ್ಕೆ ಮಣಿದು ವಿವಾಹವಾಗಲು ಒಪ್ಪಿದ್ದ 17 ವರ್ಷದ ಯುವತಿ ತನ್ನ ಮದುವೆಗೆ ತಡೆ ಒಡ್ಡಲು ಮುಖ್ಯಮಂತ್ರಿಗಳ.....
ರಘುಬರ್ ದಾಸ್
ರಘುಬರ್ ದಾಸ್

ರಾಂಚಿ: ಪೋಷಕರ ಒತ್ತಾಯಕ್ಕೆ ಮಣಿದು ವಿವಾಹವಾಗಲು ಒಪ್ಪಿದ್ದ 17 ವರ್ಷದ ಯುವತಿ ತನ್ನ ಮದುವೆಗೆ ತಡೆ ಒಡ್ಡಲು ಮುಖ್ಯಮಂತ್ರಿಗಳ ಸಹಾಯ ಪಡೆದ ಘಟನೆ ಜಾರ್ಖಂಡ್ ನ ರಾಂಚಿಯಲ್ಲಿ ನಡೆದಿದೆ.
ಮುಖ್ಯಮಂತ್ರಿ ರಘುಬರ್ ದಾಸ್ ಸ್ವತಃ ಯುವತಿಯ ಪೋಷಕರ ಮನವೊಲಿಸಿ ಮದುವೆ ನಿಲ್ಲಿಸಿದ್ದಾರೆ.
ರಾಂಚಿಯ ಟೆಕ್ನಾಲಜಿ ಇನ್ ಸ್ಟಿಟ್ಯೂಟ್ ನಲ್ಲಿ ವ್ಯಾಸಂಗ ಮಾಡುತ್ತಿರುವ ಯುವತಿ ಮುಖ್ಯಮಂತ್ರಿಗಳ ಜನ ಸಂಪರ್ಕ ಸಭೆಯಲ್ಲಿ ಬಂದು ತನ್ನ ಅಳಲು ತೋಡಿಕೊಂಡಿದ್ದಾಳೆ. ಸಿಎಂ ದಾಸ್ ಆಕೆಯ ತಂದೆ ದೂರವಾಣಿ ಸಂಖ್ಯೆ ಪಡೆದುಕೊಂಡು ಅವರೊಂದಿಗೆ ಮಾತನಾಡಿ  ಕಾನೂನು ಪ್ರಕಾರ 18 ವರ್ಷ ತುಂಬುವ ಮೊದಲೇ ಮದುವೆ ಮಾಡುವುದು ತಪ್ಪು. ಹೀಗಾಗಿ ಮದುವೆ ರದ್ದು ಪಡಿಸುವಂತೆ ಸೂಚಿಸಿದರು ಎಂದು ಸಿಎಂ ಕಾರ್ಯಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಜೊತೆಗೆ  ಯುವತಿ ವಿದ್ಯಾಭ್ಯಾಸಕ್ಕೆ ಅವರ ಹಣಕಾಸಿನ ತೊಂದರೆ ಇದ್ದರೆ ಕೂಡಲೆ ಸರ್ಕಾರದ ವತಿಯಿಂದ ಧನ ಸಹಾಯ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.





ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com