ಗನ್ ಮ್ಯಾನ್ ಕಣ್ಣು ಹೊಡೆದ ತಪ್ಪಿಗೆ ರಾಜಕಾರಣಿಯ ಕಾರು ಏರಿ ಮಹಿಳೆಯ ಪ್ರತಿಭಟನೆ

ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಮುಖಂಡರು ಮತ್ತೊಮ್ಮೆ ಮುಜುಗರ ಅನುಭವಿಸುವಂತಾಗಿದೆ.
ಕಾರು ಏರಿ ಪ್ರತಿಭಟಿಸುತ್ತಿರುವ ಮಹಿಳೆ
ಕಾರು ಏರಿ ಪ್ರತಿಭಟಿಸುತ್ತಿರುವ ಮಹಿಳೆ
Updated on

ಆಗ್ರಾ: ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಮುಖಂಡರು ಮತ್ತೊಮ್ಮೆ ಮುಜುಗರ ಅನುಭವಿಸುವಂತಾಗಿದೆ.

ಸಮಾಜವಾದಿ ಪಕ್ಷದ ಮುಖಂಡನ ಗನ್ ಮ್ಯಾನ್ ಕಣ್ಣು ಹೊಡೆದಿದ್ದಕ್ಕೆ ಮಹಿಳೆಯೊಬ್ಬಳು ಮರ್ಸಿಡಿಸ್ ಕಾರಿನ ಮೇಲೆ ಹತ್ತಿ, ಕಾರಿನ ವೈಂಡ್ ಶೀಲ್ಡ್ ಮುರಿದು ಹಾಕಿದ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.

ಭಾನುವಾರ ಸಂಜೆ ಉತ್ತರ ಪ್ರದೇಶದ ಆಗ್ರಾ ನಿವಾಸಿ ಸಾದ್ವಿ ಪಾಂಡೆ ತನ್ನ ಸಹೋದರಿ ಜೊತೆ ವೈದ್ಯರನ್ನು ನೋಡಲು ಹೋಗುತ್ತಿದ್ದರು. ಈ ವೇಳೆ ಸಿಗ್ನಲ್ ದ್ದದ್ದರಿಂದ ಟ್ರಾಫಿಕ್ ನಲ್ಲಿ ತಮ್ಮ ಸ್ಕೂಟಿ ನಿಲ್ಲಿಸಿಕೊಂಡು ನಿಂತಿದ್ದರು.

ಪಕ್ಕದಲ್ಲಿ ಸಮಾಜವಾದಿ ಪಕ್ಷದ ಮುಖಂಡ ಅಭಿನವ್ ಶರ್ಮಾ ಕಾರಿನಲ್ಲಿದ್ದ ಆತನ ಗನ್ ಮ್ಯಾನ್ ಸಾದ್ವಿ ಪಾಂಡೆ ನೋಡಿ ಕಣ್ಣು ಹೊಡೆದಿದ್ದಾನೆ. ಇದರಿಂದ ಆಕ್ರೋಶಗೊಂಡ ಆಕೆ ಅಭಿನವ್ ಶರ್ಮಾ ಅವರ ಮರ್ಸಿಡಿಸ್ ಕಾರಿನ ಮೇಲೆ ಜಂಪ್ ಮಾಡಿ, ಕಾರಿನ ಮುಂಭಾಗ ಇದ್ದ ಧ್ವಜ ಕಿತ್ತು ಹಾಕಿದ್ದಾರೆ. ಜೊತೆಗೆ ಕಾರಿನ ವೈಂಡ್ ಶೀಲ್ಡ್ ಅನ್ನು ಮುರಿದು ಹಾಕಿರುವ 2 ನಿಮಿಷದ ದೃಶ್ಯಗಳು ಅಂತರ್ಜಾಲ ದಲ್ಲಿ ಹರಿದಾಡುತ್ತಿದೆ.

ಈ ವೇಳೆ ಮಹಿಳೆಯ ಮೊಬೈಲ್ ಬಿದ್ದು ಹಾನಿಯಾಯ್ತು. ನಂತರ ಬಂದ ಪೊಲೀಸರು ಗುಂಪನ್ನು ಚದುರಿಸಿ ಪರಿಸ್ಥಿತಿ ಶಾಂತಗೊಳಿಸಿದ್ರು. ಪೊಲೀಸರ ಮಧ್ಯಪ್ರವೇಶದಿಂದ ಆಕೆಯ ಮೊಬೈಲ್ ರಿಪೇರಿಗೆ ಹಣ ನೀಡಿ ವಾಪಸ್ ಕಳುಹಿಸಲಾಯ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com