ಮಹಿಳೆ ಮೇಲೆ ಅತ್ಯಾಚಾರ ಪ್ರಕರಣ: ನಾರಾಯಣ ಸಾಯಿಗೆ 3 ವಾರಗಳ ಜಾಮೀನು

ಅತ್ಯಾಚಾರ ಪ್ರಕರಣದಲ್ಲಿ ಜೈಲಿನಲ್ಲಿರುವ ಸ್ವಯಂ ಘೋಷಿತ ದೇವ ಮಾನವ ಅಸಾರಾಂ ಬಾಪು ಪುತ್ರ ನಾರಾಯಣ ಸಾಯಿಗೆ ಗುಜರಾತ್ ಹೈಕೋರ್ಟ್.....
ನಾರಾಯಣ ಸಾಯಿ
ನಾರಾಯಣ ಸಾಯಿ

ಅಹಮದಾಬಾದ್: ಅತ್ಯಾಚಾರ ಪ್ರಕರಣದಲ್ಲಿ ಜೈಲಿನಲ್ಲಿರುವ ಸ್ವಯಂ ಘೋಷಿತ ದೇವ ಮಾನವ ಅಸಾರಾಂ ಬಾಪು ಪುತ್ರ ನಾರಾಯಣ ಸಾಯಿಗೆ ಗುಜರಾತ್ ಹೈಕೋರ್ಟ್ ಮೂರು ವಾರಗಳ ಜಾಮೀನು ನೀಡಿದೆ.
ನಾರಾಯಣ್ ಸಾಯಿಯ ತಾಯಿಯ ಶಸ್ತ್ರ ಚಿಕಿತ್ಸೆಗಾಗಿ ಮೂರುವಾರುಗಳ ಷರತ್ತುಬದ್ಧ ಜಾಮೀನು ನೀಡಿದೆ.

ಸೂರತ್ ಮೂಲದ ಮಹಿಳೆ ಮೇಲೆ ನಡೆಸಿದ ಅತ್ಯಾಚಾರ ಪ್ರಕರಣದಲ್ಲಿ ಕಳೆದ ಒಂದು ವರ್ಷದಿಂದ ನಾರಾಯಣ ಸಾಯಿ ಜೈಲಿನಲ್ಲಿದ್ದಾರೆ.  2002 ರಿಂದ 2005 ರ ವರೆಗೆ ಸೂರತ್ ನ ಆಶ್ರಮದಲ್ಲಿ ನಾರಾಯಣ ಸಾಯಿ ನಿರಂತರ ಅತ್ಯಾಚಾರ ವೆಸಗಿದರು ಎಂದು ಮಹಿಳೆಯೊಬ್ಬರು ದಾೂರು ದಾಖಲಿಸಿದ್ದರು.

ಮತ್ತೊಂದು ಪ್ರಕರಣದಲ್ಲಿ ಸಂತ್ರಸ್ತ ಮಹಿಳೆಯ ಹಿರಿಯ ಸಹೋದರಿ ನಾರಾಯಣ ಸಾಯಿ ತಂದೆ ಅಸಾರಾಂ ಬಾಪು 2001 ರಲ್ಲಿ ಅಹಮದಾಬಾದ್ ನಲ್ಲಿರುವ ಅಶ್ರಮದಲ್ಲಿ ತಮ್ಮ ಮೇಲೆ ಅತ್ಯಾಚಾರ ನಡೆಸಿದ್ದರು ಎಂದು ಪ್ರತ್ಯೇಕ ದೂರು ದಾಖಲಿಸಿದ್ದರು.

ಜೋಧ್ ಪುರ ಆಶ್ರಮದಲ್ಲಿ ಅಪ್ರಾಪ್ರೆ ಮೇಲೆ ಅತ್ಯಾಚಾರ ಪ್ರಕರಣದಲ್ಲಿ ಅಸಾರಾಂ ಬಾಪು 2013 ಸೆಪ್ಟಂಬರ್ ನಿಂದ  ರಾಜಸ್ತಾನ ಜೈಲಿನಲ್ಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com