ಗಗನಸಖಿ ಸೇರಿ ಏರ್ ಇಂಡಿಯಾದ 17 ಸಿಬ್ಬಂದಿ ಅಮಾನತು

ವಿಮಾನ ತಡವಾಗಿ ಬಂದ ಆರೋಪದ ಮೇಲೆ ಏರ್ ಇಂಡಿಯಾದ ಹಿರಿಯ ವಿಮಾನ ಗಗನ ಸಖಿ ಸೇರಿದಂತೆ 17ಮಂದಿ ಸಿಬ್ಬಂದಿಯನ್ನು ಏರ್ ಇಂಡಿಯಾ ವಿಮಾನ ಸಂಸ್ಥೆ ಅಮಾನತು ಮಾಡಿದೆ...
ಏರ್ ಇಂಡಿಯಾ ವಿಮಾನ
ಏರ್ ಇಂಡಿಯಾ ವಿಮಾನ
Updated on

ನವದೆಹಲಿ: ವಿಮಾನ ತಡವಾಗಿ ಬಂದ ಆರೋಪದ ಮೇಲೆ ಏರ್ ಇಂಡಿಯಾದ ಹಿರಿಯ ವಿಮಾನ ಗಗನ ಸಖಿ ಸೇರಿದಂತೆ 17ಮಂದಿ ಸಿಬ್ಬಂದಿಯನ್ನು ಏರ್ ಇಂಡಿಯಾ ವಿಮಾನ ಸಂಸ್ಥೆ ಅಮಾನತು ಮಾಡಿದೆ.

ಏರ್ ಇಂಡಿಯಾ ವಿಮಾನದ ಜನರಲ್ ಮ್ಯಾನೇಜರ್ 17 ಸಿಬ್ಬಂದಿಗಳನ್ನು ಮೇ 22 ರಂದು ಅಮಾನತು ಮಾಡಿದ್ದಾರೆ. ಸಿಬ್ಬಂದಿಗಳಿಗೆ ನೀಡಿರುವ ಅಮಾನತು ಪತ್ರದಲ್ಲಿ ಅಮಾನತು ಕುರಿತಂತೆ ಯಾವುದೇ ಕಾರಣಗಳನ್ನು ನೀಡಿರದ ಏರ್ ಇಂಡಿಯಾ ಸಂಸ್ಥೆಯು, ನೇರವಾಗಿ ಅಮಾನತು ಮಾಡಿರುವುದಾಗಿ ತಿಳಿದುಬಂದಿದೆ.

ವಿರಾಮದ ಅವಧಿಯನ್ನು ಹೆಚ್ಚು ಪಡೆದ ಕಾರಣದಿಂದಾಗಿ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಗಿತ್ತು ಎಂದು ಏರ್ ಇಂಡಿಯಾದ ಮೂಲಗಳು ತಿಳಿಸಿವೆ.

ಪ್ರಸ್ತುತ ಪ್ರಕರಣ ಕುರಿತ ತನಿಖೆ ಪ್ರಗತಿಯಲ್ಲಿದ್ದು, ಅಮಾನತುಗೊಂಡ ಸಿಬ್ಬಂದಿಗಳ ವಿರುದ್ಧ ಕಠಿಣ ಕ್ರಮತೆಗೆದುಕೊಳ್ಳಲಾಗುವುದು ಎಂದು ಏರ್ ಇಂಡಿಯಾ ಸಂಸ್ಥೆಯ ಉನ್ನತಾಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com