ನವದೆಹಲಿ:ಮುಂಗಾರು ಮಳೆ ಜೂನ್ 3ರೊಳಗೆ ಕರಾವಳಿ ತೀರವನ್ನು ಬಂದಪ್ಪಳಿಸಲಿದೆ. ಹೀಗೆಂದು ಕೇರಳ ಹವಾಮಾನ ಇಲಾಖೆ ತಿಳಿಸಿದೆ.
ಕೇರಳ ರಾಜ್ಯದ ಆಲಪ್ಪುಜ ಜಿಲ್ಲೆಯ ಸುತ್ತಮುತ್ತ ಆಕಾಶದಲ್ಲಿ ಮೋಡ ಕವಿದಿದ್ದು, ಇನ್ನೆರಡು ದಿನಗಳಲ್ಲಿ ಮಳೆ ಸುರಿಯುವ ಲಕ್ಷಣಗಳು ಕಾಣುತ್ತಿವೆ. ಬಿಸಿಲಿನಿಂದ ತತ್ತರಿಸಿ ಹೋಗಿದ್ದ ಇಲ್ಲಿನ ಜನತೆ ಕೊಂಚ ನಿರಾಳರಾಗಿದ್ದಾರೆ.
ತೆಲಂಗಾಣ, ಒಡಿಶ್ಶಾ, ಜಾರ್ಖಂಡ್ ಮತ್ತು ಮಧ್ಯಪ್ರದೇಶ ರಾಜ್ಯಗಳನ್ನು ಹೊರತುಪಡಿಸಿ ದೇಶಾದ್ಯಂತ ಉಳಿದೆಡೆಗಳಲ್ಲಿ ಮುಂಗಾರು ಮಳೆ ಆರಂಭವಾಗುವ ಸಾಧ್ಯತಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
Advertisement