ದಯಾ ಮರಣಕ್ಕೆ ಅನುಮತಿ ನೀಡಿ: ನೊಂದ ತಂದೆಯಿಂದ ರಾಷ್ಟ್ರಪತಿಗೆ ಅರ್ಜಿ

ಅಪರೂಪದ ನರ ಸಂಬಂಧಿ ಖಾಯಿಲೆಯಿಂದ ಬಳಲುತ್ತಿರುವ ಮಕ್ಕಳಿಗೆ ಚಿಕಿತ್ಸೆ ಭರಿಸಲಾಗದ ತಂದೆಯೊಬ್ಬರು ದಯಾ ಮರಣಕ್ಕೆ ಒಪ್ಪಿಗೆ ನೀಡುವಂತೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಪತ್ರ ಬರೆದಿರುವ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ...
ಅಪರೂಪದ ನರ ಸಂಬಂಧಿ ಖಾಯಿಲೆಯಿಂದ ಬಳಲುತ್ತಿರುವ ಮಕ್ಕಳ ಚಿತ್ರ. ( ಫೋಟೋ ಕೃಪೆ: ಐಬಿಎನ್ ಲೈವ್)
ಅಪರೂಪದ ನರ ಸಂಬಂಧಿ ಖಾಯಿಲೆಯಿಂದ ಬಳಲುತ್ತಿರುವ ಮಕ್ಕಳ ಚಿತ್ರ. ( ಫೋಟೋ ಕೃಪೆ: ಐಬಿಎನ್ ಲೈವ್)

ನವದೆಹಲಿ: ಅಪರೂಪದ ನರ ಸಂಬಂಧಿ ಖಾಯಿಲೆಯಿಂದ ಬಳಲುತ್ತಿರುವ ಮಕ್ಕಳಿಗೆ ಚಿಕಿತ್ಸೆ ಭರಿಸಲಾಗದ ತಂದೆಯೊಬ್ಬರು ದಯಾಮರಣಕ್ಕೆ ಒಪ್ಪಿಗೆ ನೀಡುವಂತೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಪತ್ರ ಬರೆದಿರುವ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ.

ಮೊಹಮದ್ ನಜೀರ್ ಎಂಬುವವರಿಗೆ 6 ಮಕ್ಕಳಿದ್ದೂ, ಆರು ಮಕ್ಕಳೂ ಅಪರೂಪದ ನರಸಂಬಂಧಿತ ಖಾಯಿಲೆಯಿಂದ ಬಳಲುತ್ತಿದ್ದಾರೆ. ಈ ಖಾಯಿಲೆಯಿಂದಾಗಿ ಮಕ್ಕಳ ಹೊಟ್ಟೆಯ ಕೆಳಭಾಗದ ಎಲ್ಲಾ ಅಂಗಾಂಗಳು ಪಾರ್ಶ್ವವಾಯುವಿಗೆ ತುತ್ತಾಗಿವೆ. ದಿನದಿಂದ ದಿನಕ್ಕೆ ಮಕ್ಕಳ ಆರೋಗ್ಯ ಹದಗೆಡುತ್ತಿದೆ. ಹೀಗಾಗಿ ಚಿಕಿತ್ಸೆ ವೆಚ್ಚ ಭರಿಸಲಾಗದ ತಂದೆಯೊಬ್ಬರು ಮಕ್ಕಳು ಪಡುತ್ತಿರುವ ರೋಧನೆಯನ್ನು ನೋಡಲಾಗದೆ, ರಾಷ್ಟ್ರಪತಿ ಪ್ರಣಬ್ ಮುಖರ್ಜಿಗೆ ಪತ್ರ ಬರೆದಿದ್ದಾರೆ ಎಂದು ತಿಳಿದುಬಂದಿದೆ.

ಪತ್ರದಲ್ಲಿ ಮೊಹಮದ್ ನಜೀರ್ ಅವರು ಮಕ್ಕಳ ಖಾಯಿಲೆ ಕುರಿತಂತೆ ಹಾಗೂ ಮಕ್ಕಳ ಕಷ್ಟಗಳ ಕುರಿತಂತೆ ವಿವರಣೆ ನೀಡಿದ್ದು, ಮಕ್ಕಳಿಗೆ ದಯಾ ಮರಣಕ್ಕೆ ಒಪ್ಪಿಗೆ ನೀಡುವಂತೆ ಮನವಿ ಮಾಡಿದ್ದಾರೆಂದು ತಿಳಿದುಬಂದಿದೆ.

ಇತರೆ ಮಕ್ಕಳಂತೆ ಓಡಾಡಲು, ಆಟವಾಡಲು ಸಾಧ್ಯವಾಗದೆ ಪ್ರತಿನಿತ್ಯ ನೋವಿನಿಂದ ಬಳಲುತ್ತಿರುತ್ತಾರೆ. ಇನ್ನು ಕೆಲವು ದಿನಗಳ ನಂತರ ಮಕ್ಕಳಿಗೆ ಹೃದಯ ಸಂಬಂಧಿ ತೊಂದರೆ ಕಾಣಿಸಲಿದ್ದು, ರೋಗವನ್ನು ಗುಣಪಡಿಸಲು ಚಿಕಿತ್ಸೆ ಇದೆ ಎಂದು ವೈದ್ಯರು ಹೇಳುತ್ತಾರೆ. ಆದರೆ ಮಕ್ಕಳ ರೋಗವನ್ನು ಗುಣಪಡಿಸುವಷ್ಟು ಹಣ ನನ್ನ ಬಳಿಯಿಲ್ಲ. ಹಾಗಾಗಿ ಮಕ್ಕಳು ಪ್ರತಿನಿತ್ಯ ನೋವಿನಿಂದ ಚೀರುವುದನ್ನು ನೋಡಲು ಸಾಧ್ಯವಾಗುತ್ತಿಲ್ಲ. ದಯಾಮರಣಕ್ಕೆ ಅನುಮತಿ ನೀಡುವಂತೆ ಮೊಹಮದ್ ನಜೀರ್ ರಾಷ್ಟ್ರಪತಿ ಅವರಿಗೆ ಪತ್ರ ಬರೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com