ಹಿಂಸಾಚಾರದ ವಿರುದ್ಧ ಧನಿ ಎತ್ತಿರುವ ಈ ಮೂವರು ಸಾಹಿತಿಗಳ ಕುಟುಂಬ ತಮಗೆ ನ್ಯಾಯಾ ಒದಗಿಸಿಕೊಡುವಂತೆ ಬೇಡಿಕೆ ಇಟ್ಟಿದ್ದಾರೆ. ನವದೆಹಲಿಯಲ್ಲಿ ಸಾಹಿತಿಗಳ ಹತ್ಯೆಗೆ ವಿರೋಧಿಸಿ ಸಾಹಿತಿಗಳು, ಕಲಾವಿದರು ಸಭೆ ಸೇರಿದ್ದರು. ಸಭೆಯಲ್ಲಿ ಮಾತನಾಡಿದ ಗೋವಿಂದ ಪನ್ಸಾರೆ ಅವರ ಸೊಸೆ ಮೇಘ ಪನ್ಸಾರೆ, ಸಾಹಿತಿಗಳಿಗೆ ಗುಂಡು ಹಾರಿಸಿದವರನ್ನು ಕೂಡಲೇ ಬಂಧಿಸಿ ಶಿಕ್ಷಿಸಬೇಕು ಎಂದು ಆಗ್ರಹಿಸಿದ್ದಾರೆ.