ನವದೆಹಲಿ: ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ನವೆಂಬರ್ 26ರಿಂದ ಡಿಸೆಂಬರ್ 23ರವರೆಗೆ ಚಳಿಗಾಲದ ಅಧಿವೇಶನ ಕರೆದಿದ್ದು, ಬಿಹಾರ ವಿಧಾನಸಭೆ ಚುನಾವಣೆಯ ಹೀನಾಯ ಸೋಲಿನಿಂದಾಗಿ ಸಂಸತ್ತಿನಲ್ಲಿ ಸರ್ಕಾರವನ್ನು ಹಣಿಯಲು ಪ್ರತಿಪಕ್ಷಗಳಿಗೆ ಇನ್ನಷ್ಟು ಬಲ ನೀಡಿದಂತಾಗಿದೆ.
ಇಂದು ಬೆಳಗ್ಗೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ನಡೆದ ಸಂಸತ್ ವ್ಯವಹಾರಗಳ ಸಂಪುಟ ಸಮಿತಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಬಿಜೆಪಿ ಗೆದ್ದಿದ್ದರೆ ನನೆಗುದಿಗೆ ಬಿದ್ದಿದ್ದ ಸುಧಾರಣಾ ವಿಧೇಯಕಗಳಿಗೆ ಅಂಗೀಕಾರ ಪಡೆಯುವುದು ಸರ್ಕಾರಕ್ಕೆ ಸುಲಭ ವಾಗುತ್ತಿತ್ತು. ಈಗ ಜಿಎಸ್ಟಿ, ರಿಯಲ್ ಎಸ್ಟೇಟ್, ಕಾರ್ಮಿಕರ ಸುಧಾರಣಾ ವಿಧೇಯಕಗಳು ಮತ್ತೆ ಮೂಲಗುಂಪಾಗುವ ಸಾಧ್ಯತೆಗಳಿವೆ.
Advertisement