ಪ್ರಶಸ್ತಿ ವಾಪಸ್ ವಿಚಾರ: ಭಾವನೆಗಳ ಬೆನ್ನತ್ತಿ ಹೋಗಬಾರದು, ಪ್ರಣಬ್ ಮುಖರ್ಜಿ

ಲೇಖಕರು ಹಾಗೂ ಬರಹಗಾರರು ಚರ್ಚೆ ಮೂಲಕ ತಮ್ಮ ವಿರೋಧವನ್ನು ವ್ಯಕ್ತಪಡಿಸಬೇಕು. ಅದು ಬಿಟ್ಟು, ಭಾವನೆಗಳ ಬೆನ್ನತ್ತಿ ಹೋಗಬಾರದು,' ಎಂದು ರಾಷ್ಟ್ರಪತಿ ...
ಪ್ರಣಬ್ ಮುಖರ್ಜಿ
ಪ್ರಣಬ್ ಮುಖರ್ಜಿ
Updated on

ನವದೆಹಲಿ: ಲೇಖಕರು ಹಾಗೂ ಬರಹಗಾರರು ಚರ್ಚೆ ಮೂಲಕ ತಮ್ಮ ವಿರೋಧವನ್ನು ವ್ಯಕ್ತಪಡಿಸಬೇಕು. ಅದು ಬಿಟ್ಟು, ಭಾವನೆಗಳ ಬೆನ್ನತ್ತಿ ಹೋಗಬಾರದು,' ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದ್ದಾರೆ.

ಭಾರತೀಯ ಮಾಧ್ಯಮ ಮಂಡಳಿ ಆಯೋಜಿಸಿದ್ದ ರಾಷ್ಟ್ರೀಯ ಮಾಧ್ಯಮ ದಿನವನ್ನು ಉದ್ಘಾಟಿಸಿ, ಮಾತನಾಡಿದ ಅವರು ದೇಶದಲ್ಲಿ ಅಸಹಿಷ್ಣುತೆ ಹೆಚ್ಚಾಗುತ್ತಿದೆ ಎಂದು ಆರೋಪಿಸಿ ಪ್ರಶಸ್ತಿ ಹಿಂದಿರುಗಿಸುತ್ತಿರುವುದು ಸರಿಯಲ್ಲ ಎಂದು ಅಭಿಪ್ರಾಯ ಪಟ್ಟರು.

ಸಮಾಜದಲ್ಲಿ ಸಂಭವಿಸುವ ಘಟನೆಗಳಿಂದ ಕೆಲವು ಸೂಕ್ಷ್ಮ ಮನಸ್ಸುಗಳಿಗೆ ನೋವಾಗುವುದು ಸಹಜ. ಅಂಥ ಘಟನೆಗಳ ಮೇಲೆ ಸಹಾನುಭೂತಿ ತೋರಿ, ವಿವೇಕದಿಂದ ವರ್ತಿಸಬೇಕು. ಭಾವನೆಗಳದ್ದೇ ಮೇಲಾಟವಾಗದಂತೆ ಎಚ್ಚರವಹಿಸಬೇಕು,' ಎಂದು ಸಲಹೆ ನೀಡಿದ್ದಾರೆ.

'ಭಾರತೀಯರಾಗಿ ನಮ್ಮ ಸಂವಿಧಾನದಲ್ಲಿ ಉಲ್ಲೇಖಿಸಿರುವ ಮೌಲ್ಯಗಳು ಹಾಗೂ ಆದರ್ಶಗಳಿಗೆ ನಾವು ಹೆಮ್ಮೆ ಪಡಬೇಕು. ಅಂಥ ಅಹಿತಕರ ಘಟನೆಗಳು ನಡೆದಾಗ ತಿದ್ದಿಕೊಳ್ಳಲು ಸಂವಿಧಾನದಲ್ಲಿ ಅವಕಾಶವಿದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com