`ತೋರಣ ಗೇಟ್'(ದ್ವಾರ) ಅನ್ನು ನರೇಂದ್ರ ಮೋದಿ ಹಾಗೂ ಮಲೇಷ್ಯಾ ಪ್ರಧಾನಿ ನಜೀಬ್ ರಝಾಕ್ ಉದ್ಘಾಟಿಸಿದ್ದಾರೆ.ಕೌಲಾಲಂಪುರದ ಲಿಟ್ಲ್ ಇಂಡಿಯಾಯೋ ಜನೆಗೆ ಕೊಡುಗೆಯಾಗಿ ಭಾರತವು ಈ ಗೇಟ್ ನಿರ್ಮಿಸಿದೆ. ಈ ಗೇಟ್ ನಿರ್ಮಾಣಕ್ಕೆ ರು.6.70 ಕೋಟಿ ವೆಚ್ಚ ಮಾಡಲಾಗಿದೆ. ಈ ಗೇಟ್ ಅನ್ನು ಸಾಂಚಿಯಲ್ಲಿ ರುವ ಬೌದ್ಧ ಸ್ಥೂಪಗಳಲ್ಲಿರುವ ತೋರಣ ಗಳಿಂದ ಪ್ರೇರಣೆ ಪಡೆದು ನಿರ್ಮಿಸಲಾಗಿದೆ. ಪ್ರಾಚೀನ ಭಾರತೀಯ ಹಾಗೂ ಇಸ್ಲಾಮಿಕ್ ಕಲೆಯ ಮಿಶ್ರಣ ಈ ಗೇಟ್ನಲ್ಲಿ ಕಾಣ ಸಿಗುತ್ತದೆ. ಸಾಗರ, ಬಾಹ್ಯಾಕಾಶದಲ್ಲಿ ಪೈಪೋಟಿ ಬೇಡ: ಮಲೇಷ್ಯಾ ಪ್ರವಾಸ ಮುಗಿಸಿ ಶನಿವಾರ ಸಂಜೆ ಸಿಂಗಾಪುರಕ್ಕೆ ಆಗಮಿಸಿರುವ ಪ್ರಧಾನಿ ಮೋದಿ, ಸಾಗರಗಳು, ಬಾಹ್ಯಾಕಾಶ ಹಾಗೂ ಸೈಬರ್ ಜಗತ್ತು ದೇಶ ದೇಶಗಳ ನಡುವಿನ ಸ್ಪರ್ಧೆಯ ಹೊಸ ವೇದಿಕೆಗಳಾಗ ಬಾರದು. ಬದಲಾಗಿ ಅದು ಎಲ್ಲರ ಸಮೃದ್ಧಿಯ ಭಾಗವಾಗಬೇಕು ಎಂದರು.