ನವದೆಹಲಿ: ಗುರುನಾನಕ್ ಜಯಂತಿಯಾದ ಇಂದು ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ. ಜೊತೆಗೆ ಸಾಮರಸ್ಯ ಹಾಗೂ ಸಹಾನುಭೂತಿಯ ಸಂದೇಶವನ್ನು ಮೋದಿ ಒತ್ತಿ ಹೇಳಿದ್ದಾರೆ.
"ಗುರುನಾನಕ್ ಜಯಂತಿಯ ಈ ಶುಭ ದಿನದಂದು ದೇಶದ ಪ್ರತಿಯೋರ್ವರಿಗೂ ನನ್ನ ಶುಭ ಹಾರೈಕೆಗಳು. ನಿಸ್ವಾರ್ತ ಸೇವೆ, ಸಹಾನುಭೂತಿ ಮತ್ತು ಸಾಮರಸ್ಯದ ಗುರುನಾನಕ್ ದೇವ್ ಅವರ ಸಂದೇಶ ನಮ್ಮೆಲ್ಲರಿಗೂ ಚಿರಕಾಲ ಸ್ಫೂರ್ತಿದಾಯಕವಾಗಲಿ' ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ದೇಶದಲ್ಲಿ ಅಸಹನೆ, ಅಸಹಿಷ್ಣುತೆ ಹೆಚ್ಚುತ್ತಿದೆ ಎಂಬ ಬಗ್ಗೆ ನಡೆಯುತ್ತಿರುವ ಚರ್ಚೆಯನ್ನು ಇನ್ನಷ್ಟು ತೀವ್ರಗೊಳಿಸಿರುವ ಬಾಲಿವುಡ್ ನಟ ಆಮಿರ್ ಖಾನ್ ಅವರ ಹೇಳಿಕೆಯ ಹಿನ್ನೆಲೆಯಲ್ಲಿ ಮೋದಿ ಅವರ ಸಾಮರಸ್ಯ ಮತ್ತು ಸಹಿಷ್ಣುತೆಯ ಸಂದೇಶ ಮಹತ್ವವನ್ನು ಪಡೆದಿದೆ.
Advertisement