ನಮ್ಮ ಕಾರ್ಯಕಾರಿ ಸಭೆಯಲ್ಲಿ, ಪ್ರಶಸ್ತಿ ವಾಪಸಿ ಕುರಿತು ನಮ್ಮ ಸದಸ್ಯರೇನು ಮಾಡಬಹುದು ಎಂಬುದನ್ನು ಚರ್ಚಿಸಲಿದ್ದೇವೆ. ಹೀಗೆ ಪ್ರಶಸ್ತಿಗಳನ್ನು ಮರಳಿಸಬಹುದೇ, ಮರಳಿಸುವುದಾದರೆ ಅದರ ಕುರಿತು ಲಿಖಿತ ನಿಯಮಗಳನ್ನು ರಚಿಸಬಹುದೇ ಎಂಬುದರ ಕುರಿತೂ ಚರ್ಚಿಸಲಾಗುವುದು ಎಂದು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ವಿಶ್ವನಾಥ ಪ್ರಸಾದ್ ತಿವಾರಿ ಹೇಳಿದ್ದಾರೆ.