ಜನಲೋಕ ಪಾಲ್ ಬಿಲ್ ಮಹಾಜೋಕ್ ಪಾಲ್: ಪ್ರಶಾಂತ್ ಭೂಷಣ್

ದೆಹಲಿಯ ಆಪ್ ಸರ್ಕಾರದ ಜನಲೋಕಪಾಲ್ ಬಿಲ್ ಅತಿ ದೊಡ್ಡ ಜೋಕ್ ಪಾಲ್ ಬಿಲ್ ಆಗಿದೆ. ದಿಲ್ಲಿ ಜನಲೋಕಪಾಲ್ ಅತಿ ದುರ್ಬಲವಾಗಿದೆ ಎಂದು ....
ಕೇಜ್ರಿವಾಲ್ ಮತ್ತು ಪ್ರಶಾಂತ್ ಭೂಷಣ್
ಕೇಜ್ರಿವಾಲ್ ಮತ್ತು ಪ್ರಶಾಂತ್ ಭೂಷಣ್
Updated on

ನವದೆಹಲಿ: ದೆಹಲಿಯ ಆಪ್  ಸರ್ಕಾರದ ಜನಲೋಕಪಾಲ್ ಬಿಲ್ ಅತಿ ದೊಡ್ಡ ಜೋಕ್ ಪಾಲ್  ಬಿಲ್ ಆಗಿದೆ. ದಿಲ್ಲಿ ಜನಲೋಕಪಾಲ್  ಅತಿ ದುರ್ಬಲವಾಗಿದೆ ಎಂದು ಆಮ್ ಆದ್ಮಿ ಪಕ್ಷದ ಮಾಜಿ ಮುಖಂಡ ಪ್ರಶಾಂತ್ ಭೂಷಣ್ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಕಿಡಿಕಾರಿದ್ದಾರೆ.

ಕೇಂದ್ರದ ಜೊತೆ ಸಂಘರ್ಷಕ್ಕಾಗಿಯೇ ಕೇಜ್ರಿವಾಲ್ ಜಾರಿಗೆ ತಂದಿರುವ ಜನಲೋಕಪಾಲ್ ಮಸೂದೆಯಲ್ಲಿ ಯಾವುದೇ ಪಾರದರ್ಶಕತೆ ಇಲ್ಲ. ದೆಹಲಿ ಜನಲೋಕಪಾಲ್ ಬಿಲ್ ಹಿಂದಿನ ಯುಪಿಎ ಸರ್ಕಾರದ ಬಿಲ್ ಗಿಂತ ದುರ್ಬಲವಾಗಿದೆ ಎಂದು ಟೀಕಿಸಿದ್ದಾರೆ.

ಅರವಿಂದ್ ಕೇಜ್ರಿವಾಲ್ ಅಧಿಕಾರಕ್ಕೆ ಬಂದಿರುವುದೇ ಪ್ರಬಲ ಜನಲೋಕಪಾಲ್ ಮಸೂದೆ ಜಾರಿಗೆ ತರುವ ಹಿನ್ನೆಲೆಯಲ್ಲಿ. ಆದರೆ ಇದೀಗ ಕೇಜ್ರಿವಾಲ್ ತಮ್ಮ ಹೋರಾಟ ಮತ್ತು ಪ್ರಬಲ ಜನಲೋಕಪಾಲ್ ಮಸೂದೆ ಜಾರಿಯಿಂದ ಹಿಂದೆ ಸರಿದಿದ್ದಾರೆ. ಹಾಗಾಗಿ ಕೇಜ್ರಿವಾಲ್ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಭೂಷಣ್ ಆಗ್ರಹಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com