ಲಖನೌ: ಕೋಮು ಸೌಹಾರ್ದತೆಯನ್ನು ನಿರೂಪಿಸುವಂತಹ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಮುಸ್ಲಿಂ ಯುವಕನೊಬ್ಬ ಪ್ರಾಣವನ್ನು ಪಣಕ್ಕಿಟ್ಟು ಗೋವನ್ನು ಬದುಕಿಸಿದ್ದಾನೆ.
ಬಾವಿಯಲ್ಲಿ ಬಿದ್ದು ಜೀವನ-ಮರಣದ ನಡುವೆ ಹೋರಾಡುತ್ತಿದ್ದ ಕರುವನ್ನು ಮುಸ್ಲಿಂ ಯುವಕ ರಕ್ಷಿಸಿದ್ದಾನೆ. ಪೇಶ್ ಬಾಗ್ನಲ್ಲಿ ಬಾವಿಗೆ ಬಿದ್ದ ಕರುವನ್ನು ಮುಸ್ಲಿಂ ಯುವಕ ಮೊಹಮ್ಮದ್ ಜಾಕಿ ಬಾವಿಗೆ ಜಿಗಿದು ಕರುವನ್ನು ರಕ್ಷಿಸಿದ್ದಾನೆ, ಯುವಕನ ಕೆಲಸಕ್ಕೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಹಸು ಬಾವಿಗೆ ಬಿದ್ದಿರುವ ಘಟನೆ ತಿಳಿದು ಪೊಲೀಸರು ಸ್ಥಳಕ್ಕೆ ಆಗಮಿಸುವ ಮುನ್ನವೇ ಮುಸ್ಲಿಂ ಯುವಕ ಹಸುವನ್ನು ರಕ್ಷಿಸಿದ್ದಾನೆ ಎಂದು ಬಜಾರ್ ಖಾಲ ಪೊಲೀಸರು ತಿಳಿಸಿದ್ದಾರೆ. 60 ಅಡಿ ಉದ್ದದ ಬಾವಿಗೆ ಕರು ಬಿದ್ದಿತ್ತು, ಅದನ್ನು ಮೇಲೆತ್ತಲು ಕ್ರೇನ್ ತರಿಸಲಾಯಿತು. ಬಾವಿಯೊಳಗೆ ಇಳಿಯಲು ಯಾರೂ ಸಿದ್ಧರಿರಲಿಲ್ಲ. ಆದರೆ ಮೊಹಮ್ಮದ್ ಜಾಕಿ ಬಾವಿಗೆ ಜಿಗಿದು ಬದುಕಿಸಿದ್ದಾನೆ.
Advertisement