ದಾದ್ರಿ ಹತ್ಯೆ ಪ್ರಕರಣ: ಯುಪಿ ಸರ್ಕಾರ ನೀಡಿದ ವರದಿಯಲ್ಲಿ ಗೋಮಾಂಸದ ಪ್ರಸ್ತಾಪವಿಲ್ಲ

ಉತ್ತರ ಪ್ರದೇಶದ ದಾದ್ರಿಯಲ್ಲಿ ನಡೆದ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಖಿಲೇಶ್ ಯಾದವ್ ಸರ್ಕಾರ ಕೇಂದ್ರ ಗೃಹ ಸಚಿವಾಲಯಕ್ಕೆ ನೀಡಿರುವ ವರದಿಯಲ್ಲಿ...
ಮೃತ ವ್ಯಕ್ತಿಯ ಕುಟುಂಬಸ್ಥರು
ಮೃತ ವ್ಯಕ್ತಿಯ ಕುಟುಂಬಸ್ಥರು
Updated on

ಲಕ್ನೋ: ಉತ್ತರ ಪ್ರದೇಶದ ದಾದ್ರಿಯಲ್ಲಿ ನಡೆದ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಖಿಲೇಶ್ ಯಾದವ್ ಸರ್ಕಾರ ಕೇಂದ್ರ ಗೃಹ ಸಚಿವಾಲಯಕ್ಕೆ ನೀಡಿರುವ ವರದಿಯಲ್ಲಿ ಎಲ್ಲಿಯೂ ಗೋಮಾಂಸದ ಪ್ರಸ್ತಾಪ ಮಾಡಿಲ್ಲ ಎಂದು ತಿಳಿದು ಬಂದಿದೆ.

ವರದಿಯಲ್ಲಿ 'ಗೋ ಮಾಂಸ ಭಕ್ಷಣೆ ಅಥವಾ ಗೋ ಮಾಂಸ ಸಂಗ್ರಹ' ಎಂಬ ವಿಷಯವನ್ನೇ ಕೈ ಬಿಡಲಾಗಿದೆ. ಈ ರೀತಿಯ ಗಾಳಿ ಸುದ್ದಿ ಹರಡಿಯೇ ಮೊಹಮ್ಮದ್ ಅಖ್ಲಾಖ್ ಅವರನ್ನು ಕೊಲ್ಲಲಾಗಿದೆ ಎಂದು ಎಫ್‌ಐಆರ್‌ನಲ್ಲಿಯೂ ದಾಖಲಿಸಲಾಗಿದೆ.

ಘಟನೆ ನಡೆದ ನಾಲ್ಕು ದಿನಗಳ ನಂತರ ರಾಜ್ಯ ಸರಕಾರ  ಕೇಂದ್ರಕ್ಕೆ ವರದಿ ನೀಡಿದೆ. ಉತ್ತರ ಪ್ರದೇಶ ಪೊಲೀಸರು ಪ್ರಕರಣ ದಾಖಲಿಸಿ, ಎಫ್‌ಐಆರ್‌ನಲ್ಲಿ ದಾಖಲಿಸಿದ ಅಂಶಗಳನ್ನೇ ಕೈ ಬಿಡಲಾಗಿದೆ. ವರದಿಯಲ್ಲಿ ಅಪರಿಚಿತ ವ್ಯಕ್ತಿಗಳಿಂದ ಅಖ್ಲಾಖ್ ಹಾಗೂ ಅವರ ಮಗನ ಮೇಲೆ 'ಮಾರಾಟ ನಿಷೇಧಿಸಿದ ಪ್ರಾಣಿಯೊಂದರ ಮಾಂಸ ಸೇವಿಸಿದ' ಆರೋಪದ ಮೇಲೆ ಹಲ್ಲೆ ನಡೆಸಲಾಗಿದೆ, ಎಂದು ವರದಿಯಲ್ಲಿ ತಿಳಿಸಲಾಗಿದೆ.

ಯಾವ ಕಾರಣದಿಂದ ಗಲಭೆ ನಡೆದ ಸಾಧ್ಯತೆ ಇದೆಯೋ, ಆ ಅಂಶವನ್ನು ಉತ್ತರ ಪ್ರದೇಶ ಸರಕಾರ ಕೇಂದ್ರಕ್ಕೆ ನೀಡಿದ ವರದಿಯಲ್ಲಿ ಸೇರಿಸಿಲ್ಲ. ದಾದ್ರಿಯಲ್ಲಿ ದಾಖಲಿಸಿದ ಎಫ್‌ಐಆರ್ ಅನ್ನು ಪುನರ್ ರಚಿಸಲಾಗಿದೆ, ಎಂದು ಹಿರಿಯ ಗೃಹ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com