ಮದರ್ ತೆರೆಸಾ ಮಿಷನರೀಸ್ ಅನಾಥಾಲಯದ ಅಂಗೀಕಾರ ರದ್ದತಿಗೆ ಕೇಂದ್ರ ತೀರ್ಮಾನ?

ಮದರ್ ತೆರೆಸಾ ಅವರು ಆರಂಭಿಸಿದ್ದ ಮಿಷನರೀಸ್ ಆಫ್ ಚಾರಿಟಿಯಡಿಯಲ್ಲಿರುವ ಅನಾಥಾಲಯಗಳ ಅಂಗೀಕಾರ ರದ್ದು ಮಾಡಲು ಕೇಂದ್ರ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ನವದೆಹಲಿ: ಮದರ್ ತೆರೆಸಾ ಅವರು ಆರಂಭಿಸಿದ್ದ ಮಿಷನರೀಸ್ ಆಫ್ ಚಾರಿಟಿಯಡಿಯಲ್ಲಿರುವ ಅನಾಥಾಲಯಗಳ ಅಂಗೀಕಾರ ರದ್ದು ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ. 
ದತ್ತು ಸ್ವೀಕಾರ ನಿಯಮ ನಿಬಂಧನೆಗಳನ್ನು ಪಾಲಿಸಲು ಒಪ್ಪದೇ ಇರುವ ಕಾರಣ ಈ ಅನಾಥಾಲಯಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಮುಂದಾಗಿರುವುದಾಗಿ ಮಹಿಳೆ ಹಾಗೂ ಮಕ್ಕಳ ಕಲ್ಯಾಣ ಸಚಿವೆ ಮನೇಕಾ ಗಾಂಧಿ ಹೇಳಿದ್ದಾರೆ.
ಒಂಟಿಯಾಗಿರುವ, ವಿಚ್ಛೇದನ ಪಡೆದಿರುವ ಅಥವಾ ಸಂಬಂಧದಿಂದ ಬೇರೆಯಾಗಿರುವ ವ್ಯಕ್ತಿಗಳಿಗೆ ಮಕ್ಕಳನ್ನು ದತ್ತು ನೀಡಬಹುದಾಗಿದೆ. ಆದರೆ ಈ ಚಾರಿಟಿಗಳು ಇಂಥವರಿಗೆ ದತ್ತು ನೀಡಲು ನಿರಾಕರಿಸಿವೆ. ಆದ್ದರಿಂದಲೇ ಈ ಚಾರಿಟಿ ನಡೆಸುತ್ತಿರುವ 13 ಅನಾಥಾಲಯಗಳ ಅಂಗೀಕಾರವನ್ನು ರದ್ದು ಮಾಡಲು ನಾವು ತೀರ್ಮಾನಿಸಿದ್ದೇವೆ. ಈ ಅನಾಥಾಲಯದಲ್ಲಿದ್ದ ಮಕ್ಕಳನ್ನು ಬೇರೆ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗುವುದು ಎಂದು ಮನೇಕಾ ಗಾಂಧಿ ಹೇಳಿಕೆ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com