ಸಂಗೀತ್ ಸೋಮ್, ಅಮರ್ ಸಿಂಗ್ ನನ್ನನ್ನು ಕೊಲ್ಲಲು ಪಿತೂರಿ ನಡೆಸಿದ್ದರು: ಅಜಂ ಖಾನ್

ಬಿಜೆಪಿ ಶಾಸಕ ಸಂಗೀತ್ ಸೋಮ್ ಮತ್ತು ಸಮಾಜವಾದಿ ಪಕ್ಷದ ಮಾಜಿ ಮುಖಂಡ ಅಮರ್ ಸಿಂಗ್ ನನ್ನನ್ನು ಕೊಲ್ಲಿಸಲು ಪಿತೂರಿ ನಡೆಸಿದ್ದರು ಎಂದು ಹಿರಿಯ ಸಚಿವ ಅಜಂ ಖಾನ್ ಆರೋಪಿಸಿದ್ದಾರೆ...
ಸಂಗೀತ್ ಸೋಮ್, ಅಮರ್ ಸಿಂಗ್ ಮತ್ತು ಅಜಂಖಾನ್
ಸಂಗೀತ್ ಸೋಮ್, ಅಮರ್ ಸಿಂಗ್ ಮತ್ತು ಅಜಂಖಾನ್
Updated on

ರಾಮಪುರ್: ಬಿಜೆಪಿ ಶಾಸಕ ಸಂಗೀತ್ ಸೋಮ್ ನನ್ನನ್ನು ಕೊಲ್ಲಿಸಲು ಪಿತೂರಿ ನಡೆಸಿದ್ದರು, ಇದಕ್ಕೆ ಸಮಾಜವಾದಿ ಪಕ್ಷದ ಮಾಜಿ ಮುಖಂಡ ಅಮರ್ ಸಿಂಗ್ ಕೂಡ ಕೈ ಜೋಡಿಸಿದ್ದರು ಎಂದು ಉತ್ತರ ಪ್ರದೇಶ ಹಿರಿಯ ಸಚಿವ ಅಜಂ ಖಾನ್ ಆರೋಪಿಸಿದ್ದಾರೆ.

ಸಂಗೀತ್ ಸೋಮ್ ಮತ್ತು ಅಮರ್ ಸಿಂಗ್ ಇಬ್ಬರು ಒಂದೇ ಸಮುದಾಯದವರಾಗಿದ್ದಾರೆ. ಹೀಗಾಗಿ ನನ್ನನ್ನು ಹತ್ಯೆ ಮಾಡಲು ಪಿತೂರಿ ನಡೆಸಿದ್ದರು ಎಂದು ದೂರಿದ್ದಾರೆ.

ದಾದ್ರಿ ಹತ್ಯೆ ಪ್ರಕರಣದ ವೇಳೆ ಅಲ್ಲಿಗೆ ಭೇಟಿ ನೀಡಿದ್ದ ಶಾಸಕ ಸಂಗೀತ್ ಸೋಮ್ ದಾದ್ರಿ ಮತ್ತು ಮುಜಾಫರ್ ನಗರ ಹಿಂಸಾಚಾರದ  ಹಿಂದೆ ಅಜಂ ಖಾನ್ ಕೈವಾಡವಿದೆ ಎಂದು ಆರೋಪಿಸಿದ್ದರು.

ದಾದ್ರಿ ಘಟನೆ ಬಿಜೆಪಿಯಿಂದ ಪೂರ್ವ ನಿಯೋಜಿತವಾದದ್ದು ಎಂದು ಪ್ರತ್ಯಾರೋಪ ಮಾಡಿದ್ದ ಅಜಂ ಖಾನ್ ಆರ್ ಎಸ್ ಎಸ್ ವಿರುದ್ದ ವಾಗ್ದಾಳಿ ನಡೆಸಿದ್ದರು. ಧರ್ಮದ ಆಧಾರದ ಮೇಲೆ ಜನರನ್ನು ಒಡೆಯಲು ಬಿಜೆಪಿ ಪ್ರಯತ್ನ ಪಡುತ್ತಿದೆ ಎಂದು ಅಜಂ ಖಾನ್ ಆರೋಪಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com