ಮಹಾರಾಷ್ಟ್ರ ಸರ್ಕಾರದ ಬರ ಪರಿಹಾರ ನಿಧಿಗೆ ಎಂಸಿಎಯಿಂದ ಒಂದು ಕೋಟಿ ರೂಪಾಯಿ ಘೋಷಣೆ

ಮಹಾರಾಷ್ಟ್ರದ ಬರ ಪರಿಹಾರ ನಿಧಿಗೆ ಒಂದು ಕೋಟಿ ರೂಪಾಯಿ ನೀಡುವುದಾಗಿ ಮುಂಬೈ ಕ್ರಿಕೆಟ್ ಸಂಸ್ಥೆ ಘೋಷಿಸಿದೆ.
ಮುಂಬೈ ಕ್ರಿಕೆಟ್ ಸಂಸ್ಥೆ
ಮುಂಬೈ ಕ್ರಿಕೆಟ್ ಸಂಸ್ಥೆ

ಮುಂಬೈ: ಮಹಾರಾಷ್ಟ್ರದ ಬರ ಪರಿಹಾರ ನಿಧಿಗೆ ಒಂದು ಕೋಟಿ ರೂಪಾಯಿ ನೀಡುವುದಾಗಿ ಮುಂಬೈ ಕ್ರಿಕೆಟ್ ಸಂಸ್ಥೆ ಘೋಷಿಸಿದೆ.
ಪರಿಹಾರ ನಿಧಿಗೆ ನೀಡಲಾಗುವ ಚೆಕ್ ನ್ನು ಅಕ್ಟೋಬರ್ 25 ರಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ನೀಡಲಾಗುವುದು ಎಂದು ಎಂಸಿಎ ಉಪಾಧ್ಯಕ್ಷ ಆಶಿಶ್ ಶೇಲಾರ್ ಹೇಳಿದ್ದಾರೆ. ಸತತ ಎರಡು ವರ್ಷಗಳಿಂದ ಮಹಾರಾಷ್ಟ್ರದಲ್ಲಿ ಬರ ಉಂಟಾಗಿದೆ ಈ ಹಿನ್ನೆಲೆಯಲ್ಲಿ ಬರ ಪರಿಹಾರ ನಿಧಿಗೆ ಹಣ ನೀಡಲು ನಿರ್ಧರಿಸಲಾಗಿದೆ.
ಅ.25 ರಂದು ಮಹಾರಾಷ್ಟ್ರದ ವಾಂಖೆಡೆ ಸ್ಟೇಡಿಯಂ ನಲ್ಲಿ ಭಾರತ- ದಕ್ಷಿಣ ಆಫ್ರಿಕಾ ನಡುವೆ ಪಂದ್ಯ ನಡೆಯಲಿದ್ದು ದೇವೇಂದ್ರ ಫಡ್ನವೀಸ್ ಪಂದ್ಯ ವೀಕ್ಷಿಸಲು ಆಗಮಿಸಲಿದ್ದಾರೆ. ಈ ವೇಳೆ ಎಂಸಿಎಯಿಂದ ಚೆಕ್ ನ್ನು ನೀಡಲಾಗುವುದು ಎಂದು ಆಶಿಶ್ ಶೇಲಾರ್ ತಿಳಿಸಿದ್ದಾರೆ.
ಇನ್ನೆರಡು ಮೂರು ದಿನಗಳಲ್ಲಿ ಭಾರತ- ಆಫ್ರಿಕಾ ಸರಣಿ ಟಿಕೆಟ್ ಗಳ ಮಾರಾಟ ಆನ್ ಲೈನ್ ನಲ್ಲಿ ಪ್ರಾರಂಭವಾಗಲಿದ್ದು 5 ನೇ ಹಾಗೂ ಅಂತಿಮ ಏಕ ದಿನ ಪಂದ್ಯದ ಟಿಕೆಟ್ ದರವನ್ನು ಇಳಿಕೆ ಮಾಡಲಾಗಿದೆ ಎಂದು ಆಶೀಶ್ ಶೇಲಾರ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com