ರಾಜಸ್ಥಾನ, ಮಹಾರಾಷ್ಟ್ರ ಮೊದಲಾದೆಡೆ ಬಲಿದಾನ ದಿನವನ್ನಾಚರಿಸಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಮುಂದೆ ಬಂದಿದ್ದಾರೆ ಎಂದು ಕೌಶಿಕ್ ಹೇಳಿದ್ದಾರೆ. ಗಾಂಧಿಗಿಂತಲೂ ಹೆಚ್ಚು ದೇಶಪ್ರೇಮವಿದ್ದ ವ್ಯಕ್ತಿಯಾಗಿದ್ದರು ಗೋಡ್ಸೆ. ದೇಶದಲ್ಲಿನ ಬಹುತೇಕ ಮಂದಿಗೂ ಇದು ಗೊತ್ತಿದೆ. ಗೋಡ್ಸೆ ಗಾಂಧಿಯನ್ನು ಹತ್ಯೆ ಮಾಡಿದ್ದು ಯಾಕೆ ಎಂದು ಜನರು ಚಿಂತಿಸಲು ಈ ಬಲಿದಾನವ ಪ್ರೇರೇಪಿಸುತ್ತದೆ. ಪ್ರಸ್ತುತ ದಿನಾಚರಣೆ ಉತ್ತರ ಪ್ರದೇಶದಲ್ಲಿ ಆರಂಭವಾಗಲಿದೆ. ಈ ದಿನ ಪ್ರಯುಕ್ತ ಗೋಡ್ಸೆಯ ತ್ಯಾಗಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಕೌಶಿಕ್ ಹೇಳಿದ್ದಾರೆ.