ಪ್ರಧಾನಿ ಮೋದಿಗೆ ರಾಮ ದೇವರ ಆಶೀರ್ವಾದವಿದೆ: ಉಮಾ ಭಾರತಿ

ಪ್ರಧಾನಿ ನರೇಂದ್ರ ಮೋದಿಯವರಿಗೆ ರಾಮ ದೇವರ ಆಶೀರ್ವಾದವಿದೆ. ಬೆಲೆ ಏರಿಕೆಯನ್ನು ನಿಯಂತ್ರಣಕ್ಕೆ...
ಕೇಂದ್ರ ಜಲ ಸಂಪನ್ಮೂಲ ಸಚಿವೆ ಉಮಾ ಭಾರತಿ
ಕೇಂದ್ರ ಜಲ ಸಂಪನ್ಮೂಲ ಸಚಿವೆ ಉಮಾ ಭಾರತಿ

ಲಕ್ನೋ: ಪ್ರಧಾನಿ ನರೇಂದ್ರ ಮೋದಿಯವರಿಗೆ ರಾಮ ದೇವರ ಆಶೀರ್ವಾದವಿದೆ. ಬೆಲೆ ಏರಿಕೆಯನ್ನು ನಿಯಂತ್ರಣಕ್ಕೆ ತರುವಲ್ಲಿ ಅವರು ಯಶಸ್ವಿಯಾಗುತ್ತಾರೆ. ಹೀಗೆ ಹೇಳಿದ್ದು ಕೇಂದ್ರ ಜಲ ಸಂಪನ್ಮೂಲ ಸಚಿವೆ ಉಮಾ ಭಾರತಿ. ಈಗ ಜನ ಸಾಮಾನ್ಯರ ಬಾಯಲ್ಲಿ ಬೇಳೆ ಕಾಳುಗಳಿಗೆ ಬೆಲೆ ಹೆಚ್ಚಾದುದರ ಬಗ್ಗೆಯೇ ಮಾತು. ದಸರಾ ಹಬ್ಬದ ಸಮಯ ಬೇರೆ. ಅಗತ್ಯ ಆಹಾರ ಪದಾರ್ಥಗಳಿಗೆ ಬೆಲೆ ಏರಿಕೆಯಾದರೆ ಏನು ತಿನ್ನುವುದು ಅಂತ.ಈ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ ಉಮಾ ಭಾರತಿಯವರು ಈ ಮೇಲಿನಂತೆ ಉತ್ತರ ನೀಡಿದರು.

ಅಗತ್ಯ ವಸ್ತುಗಳ ಬೆಲೆ ಏರಿದ್ದು ನಿಜ. ಆದರೆ ಅದು ನಿಯಂತ್ರಣಕ್ಕೆ ಬರಲಿದೆ. ಪ್ರಧಾನಿ ಮೋದಿಯವರು ಶೀಘ್ರದಲ್ಲಿಯೇ ಹೆಚ್ಚಿರುವ ಬೆಲೆಯನ್ನು ನಿಯಂತ್ರಣಕ್ಕೆ ತರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅವರು ನಿನ್ನೆ ರಾತ್ರಿ ತಮ್ಮ ಸ್ವ ಕ್ಷೇತ್ರ ಝಾನ್ಸಿಯಲ್ಲಿ ದಸರಾ ಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಝಾನ್ಸಿಯ ಜಿಮ್ಕಾನಾ ಮೈದಾನದಲ್ಲಿ ಸರ್ದಾರ್ ಬಜಾರ್ ನಲ್ಲಿ ದಸರಾ ಹಬ್ಬದ ಪ್ರಯುಕ್ತ ಕಾರ್ಯಕ್ರಮ ನಡೆದಿತ್ತು. ಬೆಂಕಿಯ ಜ್ವಾಲೆಯಲ್ಲಿ ರಾವಣನ ಪ್ರತಿಕೃತಿಯನ್ನು ದಹಿಸಿ ರಾಮ ಮತ್ತು ಸೀತೆಯರನ್ನು ವೈಭವದಿಂದ ಮೆರವಣಿಗೆ ಮಾಡಲಾಯಿತು. ಉಮಾ ಭಾರತಿ ಮತ್ತು ಕೇಂದ್ರದ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಪ್ರದೀಪ್ ಆದಿತ್ಯ ಜೈನ್ ಭಾಗವಹಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com