ಅವರು ಬರೆದಿರುವ ಪತ್ರದಲ್ಲಿ ದಲಿತ ಮತ್ತು ಅಲ್ಪಸಂಖ್ಯಾತರ ಮೇಲೆ ಇಷ್ಟೊಂದು ಹಲ್ಲೆಗಳು ನಡೆಯುತ್ತಿದೆ. ಆದರೆ, ಇದಕ್ಕೆ ಅಂತ್ಯವಾಡುವಲ್ಲಿ ಯಾರ ಪ್ರಯತ್ನಗಳು ಕಾಣದಂತಾಗಿದೆ. ದಲಿತರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುತ್ತಿರುವಂತ ಹಲವಾರು ಸಂಸದರಿದ್ದಾರೆ, ಕ್ಯಾಬಿನೆಟ್ ಸಚಿವರೂ ಇದ್ದಾರೆ ಅಲ್ಲದೇ ಚುನಾಯಿತ ಮುಖ್ಯಮಂತ್ರಿಗಳೂ ಕೂಡ ಇದ್ದಾರೆ. ಆದರೆ ಅವರ ವಿರುದ್ಧ ಸರಿಯಾದ ಕ್ರಮಕೈಗೊಳ್ಳಲಾಗುತ್ತಿಲ್ಲ. ಇದರಿಂದಾಗಿ ನನಗೆ ನಾಚಿಕೆಯಿಂದ ತಲೆತಗ್ಗಿಸುವಂತಾಗಿದೆ ಎಂದು ಅವರು ಅವರು ಪತ್ರದಲ್ಲಿ ವಿಷಾಧ ವ್ಯಕ್ತಪಡಿಸಿದ್ದಾರೆ.