ರಾಯಪುರ: ನಕ್ಸಲ್ ವಿರೋಧಿ ಕಾರ್ಯಾಚರಣೆ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಸಿಆರ್ಪಿಎಫ್ ಜವಾನ ಮೃತಪಟ್ಟಿದ್ದಾರೆ.
ನಕ್ಸಲ್ ಪೀಡಿತ ಛತ್ತೀಸ್ಗಡ ಸುಕ್ಮಾ ಜಿಲ್ಲೆಯ ರಾಯಪುರದಲ್ಲಿ ನಕ್ಸಲ್ ವಿರುದ್ಧ ನಡೆದ ಗುಂಡಿನ ಕಾಳಗದ ವೇಳೆ ಮೃತಪಟ್ಟ ಜವಾನನನ್ನು ಅಶೋಕ್ಕುಮಾರ್ ಜಾಟ್ ಎಂದು ಗುರುತಿಸಲಾಗಿದೆ. ಇನ್ನೋರ್ವ ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
ನಕ್ಸಲ್ರ ಅಡಗುತಾಣವಾದ ಅರಣ್ಯ ಪ್ರದೇಶಕ್ಕೆ ಅರೆಸೇನಾ ಪಡೆ ತೆರಳಿದಾಗ ಈ ಘಟನೆ ಸಂಭವಿಸಿದೆ ಎಂದು ಸುಕಂ ಎಎಸ್ಪಿ ಸಂತೋಷ್ ಸಿಂಗ್ ತಿಳಿಸಿದ್ದಾರೆ.